ಕರ್ನಾಟಕ

karnataka

ETV Bharat / state

ಹಳಿಯಾಳದಲ್ಲಿ ಸಿಡಿಲು ಬಡಿತ:  ಹೊತ್ತಿ ಉರಿದ ತೆಂಗಿನ ಮರಗಳು - Two coconut trees burnt by thunder

ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಶೆಟ್ಟಿಗೇರಿಯಲ್ಲಿ ಸಂಜೆ ಸಿಡಿಲು ಬಡಿದ ಪರಿಣಾಮ ಎರಡು ಮರಗಳು ಹೊತ್ತಿ ಉರಿದಿವೆ.

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರಗಳು
ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರಗಳು

By

Published : Apr 20, 2020, 10:03 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ಸಂಜೆ ವೇಳೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ.

ಜಿಲ್ಲೆಯ ಕಾರವಾರ, ಕುಮಟಾ, ಹಳಿಯಾಳ, ಯಲ್ಲಾಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸಂಜೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಹಳಿಯಾಳ ಪಟ್ಟಣದ ಶೆಟ್ಟಿಗೇರಿಯಲ್ಲಿ ಸಂಜೆ ಸಿಡಿಲು ಬಡಿದ ಪರಿಣಾಮ ಎರಡು ಮರಗಳು ಹೊತ್ತಿ ಉರಿದಿವೆ.

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರಗಳು

ಅಕ್ಕಪಕ್ಕದ ಮೂರು ಮನೆಗಳ ವಿದ್ಯುತ್ ವೈರ್​ಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಕಾರವಾರದಲ್ಲಿಯೂ ಮಳೆಯ ಆರ್ಭಟ ಜೋರಾಗಿತ್ತು.

ABOUT THE AUTHOR

...view details