ಭಟ್ಕಳ : ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಭಟ್ಕಳದ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಂಸಬಾವಿ ಮೂಲದ ಸಿದ್ಧಾರ್ಥ (24), ದೀಕ್ಷಿತ್ (20), ಸಂತೋಷ (24) ರಕ್ಷಣೆಗೊಳಗಾದವರು.
ಹಂಸಬಾವಿಯಿಂದ ಐವರು ಸ್ನೇಹಿತರು ಸೇರಿ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಚೀರಾಡಿಕೊಂಡಿದ್ದು ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿಯಾದ ಚಂದ್ರಶೇಖರ್ ದೇವಾಡಿಗ, ಜಯರಾಮ, ಪಾಂಡು, ಹನುಮಂತ್ ಮೂವರನ್ನು ರಕ್ಷಿಸಿದ್ದಾರೆ.
ವೈದ್ಯ ನಾಪತ್ತೆ: ಕರ್ತವ್ಯಕ್ಕೆಂದು ಹೇಳಿ ಮನೆಯಿಂದ ಹೋದ ವೈದ್ಯರೊಬ್ಬರು ನಾಪತ್ತೆಯಾಗಿರುವ ಘಟನೆ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ಎಚ್.ಟಿ ಉಮೇಶ ನಾಪತ್ತೆಯಾಗಿದ್ದಾರೆ. ನಿಟ್ಟೂರು ಹರಪನಹಳ್ಳಿ ಮೂಲದ ಭಟ್ಕಳ ಡಿ.ಪಿ.ಕಾಲೊನಿ ನಿವಾಸಿ ಡಾ.ಉಮೇಶ್, ಅಕ್ಟೋಬರ್ 10ರಂದು ಬೆಳಗ್ಗೆ ಕರ್ತವ್ಯಕ್ಕೆ ತೆರಳುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು. ಅಂದು ರಾತ್ರಿಯಾದರೂ ವಾಪಸಾಗಿರಲಿಲ್ಲ. ಫೋನ್ ಸ್ವಿಚ್ ಆಫ್ ಆಗಿದ್ದು, ಎಲ್ಲೆಡೆ ಹುಡುಕಾಡಲಾಗಿತ್ತು. ಕೊನೆಗೆ ಪತ್ನಿ ಪೊಲೀಸ್ ದೂರು ನೀಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.