ಕರ್ನಾಟಕ

karnataka

ETV Bharat / state

ಬನವಾಸಿ ಬಳಿ ಮಾರಕಾಸ್ತ್ರ ತೋರಿಸಿ ದರೋಡೆ: 50 ಲಕ್ಷ ರೂ ಎಗರಿಸಿದ ಖದೀಮರು - 50 ಲಕ್ಷ ರೂಪಾಯಿ ಹಣ ದೋಚಿದ ಆತಂಕಕಾರಿ ಘಟನೆ

ಕಾರೊಂದರಲ್ಲಿ ಬಂದ ದುಷ್ಕರ್ಮಿಗಳ ತಂಡ ಮೂವರನ್ನು ಬೆದರಿಸಿ ಹಣ ದೋಚಿರುವ ಘಟನೆ ಬನವಾಸಿಯಲ್ಲಿ ನಡೆದಿದೆ.

three-people-threatened-and-robbed-in-banavavi
ಬನವಾಸಿ ಬಳಿ ಮಾರಕಾಸ್ತ್ರ ತೋರಿಸಿ ದರೋಡೆ: 50 ಲಕ್ಷ ಎಗರಿಸಿದ ಖದೀಮರು

By

Published : Oct 20, 2022, 12:56 PM IST

Updated : Oct 20, 2022, 1:03 PM IST

ಶಿರಸಿ (ಉತ್ತರ ಕನ್ನಡ):ಬೆಳಗಾವಿಯಿಂದ ಸಿದ್ದಾಪುರದ ಕಡೆಗೆ ಬರುತ್ತಿದ್ದ ಮೂವರನ್ನು ರಸ್ತೆ ಮಧ್ಯೆ ನಿಲ್ಲಿಸಿ, 50 ಲಕ್ಷ ರೂಪಾಯಿ ಹಣ ದೋಚಿದ ಆತಂಕಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಬಳಿ ನಡೆದಿದೆ.

ಬೆಳಗಾವಿಯಿಂದ ಸೈಟ್ ನೋಡಿಕೊಂಡು ಕಾರಿನಲ್ಲಿ ಬರುತ್ತಿದ್ದ ಸಿದ್ದಾಪುರ ತಾಲೂಕಿನ ನೆಜ್ಜೂರಿನ ಹಸೇನ್ ಜಾವೇದ್ ಖಾನ್ (25) ಹಾಗೂ ಇತರ ಇಬ್ಬರು ಬರುತ್ತಿದ್ದರು. ಬನವಾಸಿಯ ಅಂಡಗಿ ಕ್ರಾಸ್ ಚನ್ನಗಿರಿ ಬಸ್ ನಿಲ್ದಾಣ ಸಮೀಪ ಇರುವಾಗ ಹಿಂದಿನಿಂದ ಕೆಂಪು ಬಣ್ಣದ ಕಾರೊಂದರಲ್ಲಿ ಬಂದ 5-6 ಜನರ ತಂಡ ಬೆದರಿಸಿ 50 ಲಕ್ಷ ರೂ. ಹಣ ದೋಚಿದೆ.

ಆರೋಪಿಗಳು ಚಾಕು, ದೊಣ್ಣೆ, ಪಿಸ್ತೂಲ್ ತೋರಿಸಿ ಬೆದರಿಸಿ ಹಣ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಅಲ್ಲದೆ, ದೊಣ್ಣೆ ಬಳಸಿ ಕಾರಿನ ಗ್ಲಾಸ್ ಒಡೆದಿದ್ದಾರೆ. ಘಟನೆಯಲ್ಲಿ ಓರ್ವನಿಗೆ ಗಾಯವಾಗಿದ್ದು, ಸ್ಥಳಿಯರಲ್ಲಿ ಆತಂಕ ಮೂಡಿದೆ. ಗಾಯಾಳುಗಳು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ಬನವಾಸಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಎಂಬಿ ಪಾಟೀಲ್​ ಪತ್ನಿ ಫೇಸ್‌ಬುಕ್‌ ಹ್ಯಾಕ್‌: ಬಾಕ್ಸಿಂಗ್ ವಿಡಿಯೋ ಅಪ್ಲೋಡ್​​

Last Updated : Oct 20, 2022, 1:03 PM IST

ABOUT THE AUTHOR

...view details