ಕರ್ನಾಟಕ

karnataka

ETV Bharat / state

ಕಾರು-ಲಾರಿ ಮಧ್ಯೆ ಡಿಕ್ಕಿ: ಸ್ಥಳದಲ್ಲೇ ವೃದ್ಧ ಸಾವು - undefined

ಅತಿ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದ ಚಾಲಕ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವೃದ್ಧನೋರ್ವ ಮೃತಪಟ್ಟು, ಚಾಲಕನೂ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವೃದ್ಧನ ಸಾವು

By

Published : Jul 11, 2019, 11:14 PM IST

Updated : Jul 11, 2019, 11:42 PM IST

ಶಿರಸಿ:ಅತಿ ವೇಗ, ತಿಥಿ ಬೇಗ ಎಂಬ ಮಾತೇ ಇದೆ! ಹೀಗೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಚಾಲಕ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವೃದ್ಧನೋರ್ವ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ರಾಗಿ ಹೊಸಳ್ಳಿಯಲ್ಲಿ ನಡೆದಿದೆ.

ಸಿದ್ದಾಪುರದ ರವೀಂದ್ರ ನಗರದ ಪುಂಡಲೀಕ ಶಾನುಭಾಗ್ (72) ಅಪಘಾತದಲ್ಲಿ ಮೃತಪಟ್ಟ ವೃದ್ದ. ಕಾರು ಚಾಲಕ ಮಂಜುನಾಥ ಭೀಮಪ್ಪ ನೀಲಿ (39), ಸಿದ್ದಾಪುರದ ಅಶ್ವಿನಿ ಶಾನುಭಾಗ್ (27) ಹಾಗೂ ನಾರಾಯಣ ಶಾನಭಾಗ್ (82) ಗಾಯಾಳುಗಳಾಗಿದ್ದಾರೆ.

ಶಿರಸಿಯಿಂದ ಕುಮಟಾ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಶಿರಸಿಯತ್ತ ಬರುತ್ತಿದ್ದ ಲಾರಿಗೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ.

ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jul 11, 2019, 11:42 PM IST

For All Latest Updates

TAGGED:

ABOUT THE AUTHOR

...view details