ಕಾರವಾರ : ನಾಯಿ ಹಿಡಿಯಲು ಬಂದ ಚಿರತೆಯೊಂದು ಬೋನಿನಲ್ಲಿಯೇ ಸೆರೆಯಾಗಿರುವ ಘಟನೆ ಕುಮಟಾ ತಾಲೂಕಿನ ಕಿಮಾನಿಯಲ್ಲಿ ನಡೆದಿದೆ.
ತಡರಾತ್ರಿ ಕಿಮಾನಿಯಲ್ಲಿ ಚಿರತೆ ನಾಯಿ ಬೆನ್ನಟ್ಟಿ ಬಂದು ಬೋನಿನಲ್ಲಿ ಸೆರೆಯಾಗಿದೆ. ನಾಯಿ ಬೊಗಳುತ್ತಿರುವುದನ್ನು ಗಮನಿಸಿದ ಮನೆಯವರು ಹೊರ ಬಂದು ನೋಡಿದಾಗ ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿರುವುದು ತಿಳಿದಿದೆ. ಕೂಡಲೇ ಧೈರ್ಯ ಮಾಡಿದ ಸ್ಥಳೀಯರು ಬೋನಿನ ಬಾಗಿಲು ಹಾಕಿದ್ದಾರೆ.