ಕರ್ನಾಟಕ

karnataka

ಉತ್ತರಕನ್ನಡ ಜಿಲ್ಲೆಯ ಬಿಸ್​ಎನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿ...

ಉತ್ತರ ಕನ್ನಡ ಜಿಲ್ಲೆಯ ಬಿಎಸ್ಎನ್ಎಲ್ ಗ್ರಾಹಕರಿಗೆ ಮುಂದಿನ 6 ತಿಂಗಳಲ್ಲಿ ಎಲ್ಲಾ ಬಿಎಸ್ಎನ್​ಎಲ್ ಟವರ್​ಗಳಿಂದ 4ಜಿ ಸೇವೆ ಲಭ್ಯವಾಗಲಿದೆ.

By

Published : Jan 27, 2020, 11:20 PM IST

Published : Jan 27, 2020, 11:20 PM IST

karwar
ನೂತನ ಬಿಎಸ್ಎನ್ಎಲ್ ಕೇಂದ್ರ ಉದ್ಘಾಟನೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದ್ದು, ಮುಂದಿನ 6 ತಿಂಗಳಲ್ಲಿ ಎಲ್ಲಾ ಬಿಎಸ್ಎನ್​ಎಲ್ ಟವರ್​ಗಳಿಂದ 4 ಜಿ ಸೇವೆ ಲಭ್ಯವಾಗಲಿದೆ.

ಕುಮಟಾದ ಮೂರುರು ಕ್ರಾಸ್ ಬಳಿ ಇರುವ ಬಿಎಸ್ಎನ್ಎಲ್ ಕಚೇರಿಯ ನೂತನ ಬಿಎಸ್ಎನ್ಎಲ್ ಕೇಂದ್ರ ಉದ್ಘಾಟಿಸಿದ ಬಿಎಸ್​ಎನ್​ಎಲ್​ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ರಾಜಕುಮಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ತಿಂಗಳಿಗೆ 4-5 ಟವರ್​ಗಳ ನಿರ್ಮಾಣದ ಗುರಿಯೊಂದಿಗೆ ಮುಂದಿನ 6 ತಿಂಗಳಲ್ಲಿ 4ಜಿ ಸೇವೆ ನೀಡಲು ಕಾರ್ಯ ಪ್ರವೃತ್ತರಾಗಿದ್ದೇವೆ. ಇನ್ನು 3-4 ತಿಂಗಳಲ್ಲಿ ನಮ್ಮ ಸಂಸ್ಥೆಯಿಂದ 4ಜಿ ಟೆಂಡರ್ ನಡೆದು ಜೂನ್ ಹೊತ್ತಿಗೆ 4ಜಿ ಸೇವೆ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದರು.

ಜಿಲ್ಲಾ ಪ್ರಧಾನ ವ್ಯವಸ್ಥಾಪಕ ರಾಜಕುಮಾರ

ಇನ್ನು ಈ 4ಜಿ ಸೇವೆ ಹೆಚ್ಚು ಜನರನ್ನು ತಲುಪುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಮ್ಮ ತಂಡವು ಫ್ರಾಂಚೈಸಿಗಳ ಸಹಾಯದೊಂದಿಗೆ 4ಜಿ ಸೇವೆಯನ್ನು ಸ್ಪರ್ಧಾತ್ಮಕ ಗುಣಮಟ್ಟದಲ್ಲಿ ನೀಡುವ ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು. ಈವರೆಗೆ ಎಲ್ಲಾ ಕಂಪನಿಯ ಸೇವಾದಾರರು ದರ ಹೆಚ್ಚಳ ಮಾಡಿದ್ದರೂ ಬಿಎಸ್​ಎನ್​ಎಲ್ ಮಾತ್ರ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾಗಿ ಸಮಾಜದ ತಳಮಟ್ಟದಿಂದ ಎಲ್ಲ ವರ್ಗದ ಜನರ ಅಗತ್ಯಗಳಿಗೆ ಪೂರಕ ದರದಲ್ಲೇ ಇದೆ. ಮಾರುಕಟ್ಟೆಯ 25% ಕ್ಕಿಂತ ಹೆಚ್ಚು ಭಾಗವನ್ನು ಹೊಂದಿದ್ದೇವೆ. 60 ಸಾವಿರಕ್ಕೂ ಹೆಚ್ಚು ನಮ್ಮ ಗ್ರಾಹಕರಿದ್ದಾರೆ ಎಂದರು.

ಈ ವೇಳೆ ಫ್ರಾಂಚೈಸಿ ಮಾಲಿಕರಾದ ವಾಸುದೇವ ಹನುಮಂತ ನಾಯಕ ಬೆಣ್ಣೆ, ಹನುಮಂತ ನಾಯಕ, ಪ್ರಸನ್ನ ನಾಯಕ, ವಿನಾಯಕ ನಾಯಕ ಸೇರಿದಂತೆ ಇನ್ನಿತರರು ಇದ್ದರು.

ABOUT THE AUTHOR

...view details