ಕರ್ನಾಟಕ

karnataka

ETV Bharat / state

ಕುಮಟಾದ 5 ವಿಶೇಷ ಚೇತನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ - specially-abled children

ಮಂಗಳೂರಿನ ಮಂಗಳಾದೇವಿ ಕ್ರೀಡಾಂಗಣ (Mangaladevi stadium)ದಲ್ಲಿ ನ.14ರಂದು ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ದಯಾನಿಲಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ..

Cycling
ಸೈಕ್ಲಿಂಗ್

By

Published : Nov 16, 2021, 7:14 PM IST

ಕಾರವಾರ :ಕುಮಟಾ ತಾಲೂಕಿನ ದಯಾ ನಿಲಯ ಬುದ್ಧಿಮಾಂದ್ಯ ಮಕ್ಕಳ ಶಾಲೆ(Dayanilaya specially abled children school)ಯ ಐವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟ (National level sports)ಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿ

ಮಂಗಳೂರಿನ ಮಂಗಳಾದೇವಿ ಕ್ರೀಡಾಂಗಣ (Mangaladevi stadium)ದಲ್ಲಿ ನ.14ರಂದು ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ದಯಾನಿಲಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ದಯಾನಿಲಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿ

ಟೇಬಲ್ ಟೆನ್ನಿಸ್ ವಿಭಾಗದಲ್ಲಿ ವಿಘ್ನೇಶ್ ನಾಯ್ಕ್, ಶಶಾಂಕ್ ಅಂಬಿಗ ಆಯ್ಕೆಯಾಗಿದ್ದಾರೆ. ಬಾಲಕೃಷ್ಣ ಕೋರ್ಗಾಂಕರ್ ಇವರಿಗೆ ತರಬೇತಿ ನೀಡಿದ್ದರು.

ಪವರ್ ಲಿಫ್ಟಿಂಗ್ ವಿಭಾಗದಲ್ಲಿ ನಂದನ್ ದೈವಜ್ಞ, ನೆಸ್ಟರ್ ರೋಡ್ರಿಗಿಸ್ ಆಯ್ಕೆಯಾಗಿದ್ದಾರೆ. ಇವರಿಗೆ ಅನಿಲ್ ನಾಯ್ಕ್ ತರಬೇತಿ ನೀಡಿದ್ದರು. ಸೈಕ್ಲಿಂಗ್​ ವಿಭಾಗದಲ್ಲಿ ಆಯ್ಕೆಯಾದ ಶ್ರೀವತ್ಸ ಭಟ್​ಗೆ ಪುರುಷೋತ್ತಮ್ ಗೋವಾಂಕರ್ ತರಬೇತಿ ನೀಡಿದ್ದರು.

ಓದಿ:ನೈಸರ್ಗಿಕ ಮಾದರಿಯಲ್ಲಿ ಕೆರೆ ನೀರು ಶುದ್ಧೀಕರಣ : ದೇಶದಲ್ಲೇ ಮೊದಲ ಪ್ರಯತ್ನ!

ABOUT THE AUTHOR

...view details