ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ವಿಲನ್, ಕುಮಾರಸ್ವಾಮಿ ಸೈಡ್​ ಆ್ಯಕ್ಟರ್​ ಇದ್ದಂತೆ​​: ನಳಿನ್​ ಕುಮಾರ್​ ಕಟೀಲ್​ ವ್ಯಂಗ್ಯ - Irony from Naleen kumar Kateel

ಈ ಹಿಂದೆ ಇದ್ದ ಸರ್ಕಾರ ಸಮಾಜದಲ್ಲಿ ಜನರ ಮಧ್ಯೆ ಆಕ್ರೋಶ ಹುಟ್ಟಿಹಾಕಿತ್ತು. ಸಿದ್ದರಾಮಯ್ಯ ವಿಲನ್​ ಇದ್ದ ಹಾಗೆ. ಕುಮಾರಸ್ವಾಮಿ ಸೈಡ್​ ಆ್ಯಕ್ಟ್​​​ರ್​​ ಥರ ಎಂದು ನಳಿನ್​ ಕುಮಾರ್​ ಕಟೀಲ್ ವ್ಯಂಗ್ಯವಾಡಿದ್ದಾರೆ.

ವ್ಯಂಗ್ಯವಾಡಿದ ಕಟೀಲ್​

By

Published : Sep 19, 2019, 9:10 AM IST

ಶಿರಸಿ: ಮುಖ್ಯಮಂತ್ರಿ ಯಡಿಯೂರಪ್ಪ ಹೀರೋ. ಸಿದ್ದರಾಮಯ್ಯ ವಿಲನ್, ಕುಮಾರಸ್ವಾಮಿ ಸೈಡ್​ ಆ್ಯಕ್ಟರ್ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ನಳಿನ್​ ಕುಮಾರ್​ ಕಟೀಲ್​, ಬಿಜೆಪಿ ರಾಜ್ಯಾಧ್ಯಕ್ಷ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ 24 ಜನ ಹಿಂದೂ ಕಾರ್ಯಕರ್ಯರು ಸತ್ತಾಗ ಕಣ್ಣಲ್ಲಿ ನೀರು ಬರಲಿಲ್ಲ. ಮುಖ್ಯಮಂತ್ರಿ ಸ್ಥಾನ ಹಾರಿಸಿದಾಗ ಸಿದ್ದರಾಮಯ್ಯರಿಗೆ ಕಣ್ಣಲ್ಲಿ ನೀರು ಬಂತು. ಕಾಂಗ್ರೆಸ್​​ನವರು ಈ ರಾಜ್ಯದಲ್ಲಿ ಸಮಾಜವನ್ನು ಒಡೆದವರು. ಮಠ ಮಂದಿರವನ್ನು ಹಾಳು ಮಾಡಿದವರು. ಸಮಾಜದಲ್ಲಿ ಅಕ್ರೋಶ ಸೃಷ್ಟಿಮಾಡಿದವರು ಎಂದು ಕಿಡಿಕಾರಿದರು.

ABOUT THE AUTHOR

...view details