ಕರ್ನಾಟಕ

karnataka

ತಾಳ್ಮೆ ಕಳೆದುಕೊಳ್ಳಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ಹೆಚ್​ ವಿಶ್ವನಾಥ್​ಗೆ ಸಚಿವ ಹೆಬ್ಬಾರ್ ಅಭಯ

By

Published : Dec 3, 2020, 1:03 PM IST

Updated : Dec 3, 2020, 1:20 PM IST

ಹಿರಿಯರಾದ ಹೆಚ್​.ವಿಶ್ವನಾಥ್​ ಅವರು ತಾಳ್ಮೆ ಕಳೆದುಕೊಳ್ಳಬಾರದು. ನಿಮ್ಮೊಂದಿಗೆ ನಾವಿದ್ದೇವೆ. ಚುನಾವಣೆಯಲ್ಲಿ ಸೋತರೂ ಬಿಜೆಪಿ ನಿಮ್ಮನ್ನು ಪರಿಷತ್ ಸದಸ್ಯರನ್ನಾಗಿ ಮಾಡಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಶಿರಸಿಯಲ್ಲಿ ಹೇಳಿದರು.

ಸಚಿವ ಶಿವರಾಮ ಹೆಬ್ಬಾರ್
ಸಚಿವ ಶಿವರಾಮ ಹೆಬ್ಬಾರ್

ಶಿರಸಿ:ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿರುವ 17 ಜನ ಶಾಸಕರು ಎಲ್ಲರೂ ಜೊತೆಯಾಗಿದ್ದೇವೆ. ಹಾಗಾಗಿ ಹಿರಿಯರಾದ ಹೆಚ್​ ವಿಶ್ವನಾಥ್​ ಅವರು ಮಂತ್ರಿ ಮಾಡುವವರೆಗೆ ತಾಳ್ಮೆ ಕಳೆದುಕೊಳ್ಳಬಾರದು ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಓದಿ:ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವೆ: ಎಚ್‌.ವಿಶ್ವನಾಥ್

ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಉದ್ದೇಶದಿಂದ ಬಿಜೆಪಿಗೆ ಬಂದಿರುವ ಎಲ್ಲರೂ ಇಂದು, ನಾಳೆ ಯಾವಾಗಲೂ ಜೊತೆಯಾಗಿ ಇರುತ್ತೇವೆ. ಅಲ್ಲದೇ ವಿಶ್ವನಾಥ್​ ಅವರು ಚುನಾವಣೆಯಲ್ಲಿ ಸೋತರೂ ಬಿಜೆಪಿ ಪರಿಷತ್ ಸದಸ್ಯರನ್ನಾಗಿ ಮಾಡಿದೆ ಎಂದರು.

ಹೆಚ್​ ವಿಶ್ವನಾಥ್​ಗೆ ಸಚಿವ ಹೆಬ್ಬಾರ್ ಅಭಯ

ಬಿಜೆಪಿ ವಿಶ್ವನಾಥ್​ ಅವರನ್ನು ಮಂತ್ರಿ ಮಾಡುವುದನ್ನು ಅಲ್ಲಗಳೆದಿಲ್ಲ. ನ್ಯಾಯಾಲಯದಲ್ಲಿ ಅವರ ವಿರುದ್ಧ ತೀರ್ಪು ಬಂದಿದೆ. ಇದರಿಂದ ವಿಶ್ವನಾಥ್​ ಅವರು ಅಸಮಧಾನದಿಂದ ಮಾತನಾಡಿದ್ದಾರೆ. ನಾವೆಲ್ಲರೂ ನಿಮ್ಮ ಜೊತೆಯಲ್ಲಿದ್ದೇವೆ ಎಂದು ಸಂದೇಶ ನೀಡಿದರು.

ಹೆಚ್​ ವಿಶ್ವನಾಥ್​ ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಬಂದವರು. ಅವರು ಹಿರಿಯರು. ಆದ ಕಾರಣ ತಾಳ್ಮೆ ಕಳೆದುಕೊಳ್ಳಬಾರದು. ಅದು ಒಳ್ಳೆಯ ಸಂಪ್ರದಾಯವೂ ಅಲ್ಲ. ತಾಳ್ಮೆಯಿಂದ ಇರಿ ಎಂದು ಸಲಹೆಯನ್ನೂ ನೀಡಿದರು.

Last Updated : Dec 3, 2020, 1:20 PM IST

ABOUT THE AUTHOR

...view details