ಕರ್ನಾಟಕ

karnataka

By

Published : Apr 20, 2019, 5:38 PM IST

ETV Bharat / state

ಚುನಾವಣಾ ಕರ್ತವ್ಯದಲ್ಲಿದ್ದ ಸೆಕ್ಟರ್​​ ಅಧಿಕಾರಿ ಸಾವು

ಅಂಕೋಲಾದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಸಾವನ್ನಪ್ಪಿದ್ದು, ಜಿಲ್ಲಾಡಳಿತ ಸಂತಾಪ ವ್ಯಕ್ತಪಡಿಸಿದೆ.

ತೀವ್ರ ಹೃದಯಾಘಾತದಿಂದ ಸೆಕ್ಟರ್ ಅಧಿಕಾರಿ ಸಾವು

ಕಾರವಾರ: ಲೋಕಸಭಾ ಚುನಾವಣೆ ವೇಳೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

ಅಂಕೋಲಾದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದ ಆರ್.ಆರ್.ಮಾಳಶೇಖರ್ (52) ಮೃತಪಟ್ಟವರು. ಅಂಕೋಲಾದಲ್ಲಿ ಸೆಕ್ಟರ್ ಅಧಿಕಾರಿಯಾಗಿ ಚುನಾವಣಾ ಕರ್ತವ್ಯದಲ್ಲಿರುವಾಗ ತೀವ್ರ ಹೃದಯಾಘಾತವಾಗಿ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾರೆ.

ಸೆಕ್ಟರ್ ಅಧಿಕಾರಿ ಸಾವಿಗೆ ಸಂತಾಪ ಸೂಚಿಸಿದ ಜಿಲ್ಲಾಡಳಿತ

ಇನ್ನು ಕರ್ತವ್ಯನಿರತ ಅಧಿಕಾರಿ ಮೃತಪಟ್ಟಿರುವುದನ್ನು ತಿಳಿದ ಜಿಲ್ಲಾಡಳಿತ ಸಂತಾಪ ವ್ಯಕ್ತಪಡಿಸಿದೆ. ಇದೇ ವೇಳೆ ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಸಿಇಒ ಎಂ.ರೋಶನ್ ಸೇರಿದಂತೆ ಇತರೆ ಅಧಿಕಾರಿಗಳು ಮೌನಾಚರಣೆ ಮೂಲಕ ಅಧಿಕಾರಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

For All Latest Updates

ABOUT THE AUTHOR

...view details