ಕರ್ನಾಟಕ

karnataka

ETV Bharat / state

ಡಾಂಬರ್​ ಕಾಣದ್ದಕ್ಕೆ ಸಿಡಿದೆದ್ದ ಜನ : ಹೆದ್ದಾರಿಯಲ್ಲಿ ನರ್ಸರಿ ಗಿಡಗಳನ್ನಿಟ್ಟು ಆಕ್ರೋಶ - ಅಂಕೋಲಾ ತಾಲೂಕಿನ ಸುಂಕಸಾಳ ಪಂಚಾಯಿತಿ ವ್ಯಾಪ್ತಿ

ಕೇಂದ್ರ ಸರ್ಕಾರ ಒಂದೆಡೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಆಗಿದೆ ಎಂದು ಹೇಳುತ್ತಿದೆ . ಆದರೆ, ಯಲ್ಲಾಪುರ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ಕ್ಕೆ ಡಾಂಬರೀಕರಣ ಆಗದೇ ಏಳು ವರ್ಷವೇ ಕೆಳೆದಿದೆ. ರಸ್ತೆ ಡಾಂಬರು ಹಾಕುವಂತೆ ಅಂಕೋಲ ತಾಲೂಕಿನ ಜನತೆ ಹೋರಾಟ ನಡೆಸಿದ್ದು, ರಸ್ತೆಯ ಗುಂಡಿಯಲ್ಲಿ ಗಿಡನೆಟ್ಟು ಪ್ರತಿಭಟಿಸಿದ್ದಾರೆ.

Etv Bharatprotest-demanding-tar-road-of-yallapur-ankola-national-highway
Etv Bharatಡಾಂಬರು ಕಾಣದ ಹೆದ್ದಾರಿ ವಿರುದ್ಧ ಸಿಡಿದೆದ್ದ ಜನ

By

Published : Sep 27, 2022, 4:08 PM IST

ಕಾರವಾರ: ಕಳೆದ 7 ವರ್ಷಗಳಿಂದ ಡಾಂಬರು ಕಾಣದ ದಿನಕ್ಕೆ 20 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುವ ಯಲ್ಲಾಪುರ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರ ಅವ್ಯವಸ್ಥೆಯ ವಿರುದ್ಧ ನಾಗರಿಕರು ಸಿಡಿದೆದ್ದಿದ್ದಾರೆ. ಎಷ್ಟೋ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನಕ್ಕೆ ಬಾರದಕ್ಕೆ ಹೆದ್ದಾರಿಯ ಮೇಲೆ ನರ್ಸರಿ ಗಿಡಗಳನ್ನಿಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಡಾಂಬರು ಕಾಣದ ಹೆದ್ದಾರಿ ವಿರುದ್ಧ ಸಿಡಿದೆದ್ದ ಜನ

ಅಂಕೋಲಾದಿಂದ ಯಲ್ಲಾಪುರ ಹುಬ್ಬಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 63 ಸಂಚಾರಕ್ಕೆ ಸಂಚಕಾರ ಇದ್ದಂತೆ. ಹೆದ್ದಾರಿಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು, ಅಲ್ಲಲ್ಲಿ ಡಾಂಬರುಗಳು ಎದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಎಷ್ಟೇ ಮನವಿ ಮಾಡಿದರೂ ತಲೆಕೆಡಿಸಿಕೊಳ್ಳದ ಇಲಾಖೆಗಳ ವಿರುದ್ಧ ಸಿಡಿದೆದ್ದ ಅಂಕೋಲಾ ತಾಲೂಕಿನ ಸುಂಕಸಾಳ ಪಂಚಾಯಿತಿ ವ್ಯಾಪ್ತಿಯ ಹೆಬ್ಬುಳ, ಮಾಸ್ತಿಕಟ್ಟೆ, ಸುಂಕಸಾಳ, ಕೊಡ್ಲಗದ್ದೆ, ರಾಮನಗುಳಿ, ವಜ್ರಳ್ಳಿ ಭಾಗದ ಗ್ರಾಮಸ್ಥರಿಂದು ಕರವೇ ಗ್ರಾಮೀಣ ಘಟಕದ ಸಹಯೋಗದೊಂದಿಗೆ ಹೆದ್ದಾರಿಯಲ್ಲಿ ಬಾಳೆ, ಅಡಕೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಧಿಕ್ಕಾರ ಕೂಗಿ, ಕಣ್ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ನಿತ್ಯ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಶೀಘ್ರವಾಗಿ ರಸ್ತೆಗೆ ಡಾಂಬರೀಕರಣ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಮತ್ತೆ ಗಿಡಗಳನ್ನು ನೆಟ್ಟು ಬೃಹತ್ ಪ್ರತಿಭಟನೆ ಮಾಡಬೇಕಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ರಸ್ತೆ ರಿಪೇರಿ ಅಂದುಕೊಂಡು ಕಳೆದ ನಾಲ್ಕೈದು ದಿನಗಳ ಹಿಂದೆ ಜೆಸಿಬಿ ಮುಖಾಂತರ ರಸ್ತೆಯನ್ನು ಅಗೆದು ಸಮತಟ್ಟು ಮಾಡಿದ್ದಾರೆ. ಇದರಿಂದ ಮತ್ತಷ್ಟು ರಸ್ತೆಗಳಲ್ಲಿ ಹೊಂಡಗಳ ನಿರ್ಮಾಣ ಆಗುತ್ತಿವೆ. ಅವೈಜ್ಞಾನಿಕ ಕಾಮಗಾರಿಯಿಂದ ಇನ್ನಷ್ಟು ಹಾನಿಯುಂಟಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಕ್ರಮಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇದನ್ನೂ ಓದಿ :ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ವಿರೋಧಿ ಪೋಸ್ಟ್​: ಜನರ ಆಕ್ರೋಶ

ABOUT THE AUTHOR

...view details