ಕರ್ನಾಟಕ

karnataka

ETV Bharat / state

ಗಣೇಶ ಚತುರ್ಥಿ; ಭಟ್ಕಳದಲ್ಲಿ ಪೊಲೀಸ್​ ಇಲಾಖೆಯಿಂದ ಶಾಂತಿ ಸಭೆ - ganesha festival latest news

ಕೊರೊನಾ ಹಾವಳಿ ಹಿನ್ನೆಲೆ ಗೌರಿ ಗಣೇಶ ಹಬ್ಬವನ್ನು ಸರ್ಕಾರದ ನಿಯಮಾನುಸಾರ, ಶಾಂತಿಯುವಾಗಿ ಆಚರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಚರ್ಚಿಸಲು ಪೊಲೀಸ್​ ಇಲಾಖೆ ಇಂದು ಭಟ್ಕಳದಲ್ಲಿ ವಿವಿಧ ಸಮುದಾಯಗಳ ಮುಖಂಡರ ಜೊತೆ ಶಾಂತಿ ಸಭೆ ನಡೆಸಿತು.

police meeting  ganesha festival celebration
ಶಾಂತಿ ಸಭೆ

By

Published : Aug 21, 2020, 9:38 PM IST

ಭಟ್ಕಳ:ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಶಾಂತಿ ಸಭೆ

ತಹಶೀಲ್ದಾರ್​, ಪೊಲೀಸ್ ಇಲಾಖೆ ಅಧಿಕಾರಿಗಳು, ವಿವಿಧ ಸಮುದಾಯದ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಯುಕ್ತ ಭರತ್, ಈ ಬಾರಿ ಗಣೇಶ ಹಬ್ಬವನ್ನು ಮನೆಯಲ್ಲಿಯೇ ಆಚರಿಸಿ ಜನತೆ ಸಹಕರಿಸಬೇಕು ಎಂದರು.

ಸಾರ್ವಜನಿಕವಾಗಿ ಹಬ್ಬ ಆಚರಿಸಲು ಸ್ವಲ್ಪ ಸಡಿಲಿಕೆ ನೀಡಲಾಗಿದ್ದು, ಷರತ್ತುಗಳ ಪಾಲನೆ ಕಡ್ಡಾಯ. ಮುಖ್ಯವಾಗಿ ಶಾಂತಿ ಸುವ್ಯವಸ್ಥೆಯಿಂದ ಹಬ್ಬವನ್ನು ಆಚರಿಸಿಕೊಂಡು ಹೋಗುವಂತೆ ಸಮಿತಿಯವರು ಹಾಗೂ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಸಹಕರಿಸಬೇಕೆಂದು ಹೇಳಿದರು.

ಭಟ್ಕಳ ಎಎಸ್​​ಪಿ ನಿಖಿಲ್ ಬಿ. ಮಾತನಾಡಿ ಈಗಾಗಲೇ ಗಣೇಶೋತ್ಸವ ಸಮಿತಿ ಪ್ರಮುಖರೊಂದಿಗೆ ಸಾಕಷ್ಟು ಸುತ್ತಿನ ಸಭೆಯನ್ನು ಮಾಡಿದ್ದು ಅಂದೇ ಎಲ್ಲಾ ತೀರ್ಮಾನವನ್ನು ಹೇಳಿದ್ದೇವೆ. ಕೊರೊನಾದಿಂದ ದೂರವಿದ್ದು ಗಣೇಶ ಹಬ್ಬ ಆಚರಿಸಿ ಎಂದು ತಿಳಿಸಿದರು.

ಭಟ್ಕಳದಲ್ಲಿ ಎರಡು ದಿನದಲ್ಲಿ ಸಾರ್ವಜನಿಕ ಗಣೇಶೋತ್ಸವ ಮುಗಿಯಬೇಕಿದೆ. ಕನಿಷ್ಠ 20 ಮಂದಿಯೊಳಗೆ ಹಬ್ಬದ ಆಚರಣೆಗಳು ಮುಗಿಯಬೇಕು. ಸ್ಯಾನಿಟೈಜರ್​, ಮಾಸ್ಕ್​ ಕಡ್ಡಾಯದ ಬಗ್ಗೆ ಸಮಿತಿಯವರು ಭಕ್ತರಿಗೆ ಮಾಹಿತಿ ನೀಡಬೇಕು ಮತ್ತು ತೀರ್ಥ ಪ್ರಸಾದ ಹಂಚಿಕೆಗೆ ಈ ಬಾರಿ ಅವಕಾಶ ಇಲ್ಲವಾಗಿದ್ದು ಇದರ ಬಗ್ಗೆಯೂ ಜಾಗೃತಿ ಮೂಡಬೇಕಿದೆ. ಪೊಲೀಸ್​ ಇಲಾಖೆ ಎಲ್ಲದರ ಮೇಲೆ ನಿಗಾ ಇರಿಸಲಿದೆ ಎಂದರು.

ABOUT THE AUTHOR

...view details