ಕರ್ನಾಟಕ

karnataka

By

Published : Mar 12, 2021, 12:35 PM IST

ETV Bharat / state

ತಲೆ ಸಹಿತ ಇರುವ ಹುಲಿ ಚರ್ಮ ಮಾರಾಟಕ್ಕೆ ಯತ್ನ: ಆರೋಪಿ‌ ಬಂಧನ

ವ್ಯಕ್ತಿಯೋರ್ವನು ತಲೆ ಸಹಿತ ಇರುವ ಹುಲಿಯ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದನು. ಈ ಕುರಿತಂತೆ ಮಾಹಿತಿ ಪಡೆದ ಚಿಕ್ಕಮಗಳೂರಿನ ಪೊಲೀಸ್ ಅರಣ್ಯ ಸಂಚಾರಿದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಓರ್ವ ಆರೋಪಿ‌ ಬಂಧನ
Police arrested accused who trying to sell tiger skin

ಕಾರವಾರ:ತಲೆ ಸಹಿತ ಇರುವ ಹುಲಿಯ ಚರ್ಮವನ್ನು ಮಾರಾಟ ಮಾಡಲು ವ್ಯಕ್ತಿಯೋರ್ವನು ಯತ್ನಿಸುತ್ತಿದ್ದನು. ಈ ಕುರಿತಂತೆ ಮಾಹಿತಿ ಪಡೆದ ಚಿಕ್ಕಮಗಳೂರಿನ ಪೊಲೀಸ್ ಅರಣ್ಯ ಸಂಚಾರಿದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಹಳಿಯಾಳದ ಮಹಾದೇವ ನಾರಾಯಣ ತೇರಗಾಂವಕರ (55) ಬಂಧಿತ ಆರೋಪಿ. ಈತ ಹುಲಿ ಚರ್ಮವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದನು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹುಲಿಯ ಚರ್ಮ

ಬಂಧಿತನಿಂದ ಹುಲಿಯ ಚರ್ಮ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಮಾ. 23ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಓದಿ: ಹಂಪಿಯಲ್ಲಿ ಐತಿಹಾಸಿಕ ಕೋಟೆ ಗೋಡೆ ಕುಸಿತ : ತಪ್ಪಿದ ಭಾರೀ ಅನಾಹುತ

ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಎಸ್​ಐ ಆರ್.ಶೋಭಾ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಹೇಮಾವತಿ, ಅರಸ್, ಎಚ್. ದೇವರಾಜ್, ಸಿ.ಡಿ.ಎಚ್. ದಿನೇಶ್, ತಿಮ್ಮಶೆಟ್ಟಿ ಇನ್ನಿತರ ಸಿಬ್ಬಂದಿ ಭಾಗಿಯಾಗಿದ್ದರು.

ABOUT THE AUTHOR

...view details