ಕರ್ನಾಟಕ

karnataka

By

Published : Sep 26, 2019, 3:32 PM IST

ETV Bharat / state

ಪ್ಲಾಸ್ಟಿಕ್ ನಿಷೇಧ ನಮ್ಮ  ಮನೆಯಿಂದಲೇ ಪ್ರಾರಂಭವಾಗಬೇಕು: ಭಟ್ಕಳ ಉಪವಿಭಾಗಾಧಿಕಾರಿ

ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಅವರು ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅ.2 ರಿಂದ 10ರ ವರೆಗೆ ನಡೆಯುವ 'ಸ್ವಚ್ಚತಾ ಹಿ ಸೇವಾ' ಕಾರ್ಯಾಚರಣೆ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಪ್ಲಾಸ್ಟಿಕ್ ನಿಷೇಧವನ್ನು ಮೊದಲು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು: ಭಟ್ಕಳ ಉಪವಿಭಾಗಾಧಿಕಾರಿ

ಕಾರವಾರ: ಪ್ಲಾಸ್ಟಿಕ್ ನಿಷೇಧವನ್ನು ಮೊದಲು ನಮ್ಮ ನಮ್ಮ ಮನೆಯಿಂದಲೇ ಆರಂಭಿಸಬೇಕು ನಂತರ ಅದರ ದುಷ್ಪರಿಣಾಮದ ಕುರಿತು ಇತರರಿಗೆ ತಿಳಿಸಬೇಕು ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಅಭಿಪ್ರಾಯಪಟ್ಟರು.

ಸಾಜಿದ್ ಅಹ್ಮದ್ ಮುಲ್ಲಾ ಅವರು ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ 'ಸ್ವಚ್ಚತಾ ಹಿ ಸೇವಾ' ಕಾರ್ಯಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪರಿಸರದಲ್ಲಿ ಕರಗದ ಪ್ಲಾಸ್ಟಿಕ್ ಬಳಕೆಯಿಂದ ಸಮತೋಲನ ಕಾಯ್ದುಕೊಳ್ಳುವುದು ಮಹತ್ವವಾಗಿದೆ. ಪ್ಲಾಸ್ಟಿಕ್ ಬಳಕೆಯ ನಿಷೇಧದ ಕುರಿತು ಪುರಸಭೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಾವೆಲ್ಲ ಒಟ್ಟುಗೂಡಿ ಪ್ಲಾಸ್ಟಿಕ್​ ಸಂಪೂರ್ಣ ನಿರ್ಮೂಲನೆ ಕುರಿತು ಹೆಜ್ಜೆ ಇಡಬೇಕಿದೆ ಎಂದರು.

ಈ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಅಕ್ಟೋಬರ್​ 2 ರಿಂದ 10ರವರೆಗೆ ವಿವಿಧ ಜಾಗೃತಿ ಸಭೆ, ಜಾಥಾಗಳನ್ನು ಹಮ್ಮಿಕೊಳ್ಳಲಾಗುವುದು. ಹಾಗೆಯೇ ಸ್ವಚ್ಚತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಜೆಸಿಐನ ಅಧ್ಯಕ್ಷ ರಮೇಶ ಖಾರ್ವಿ ಮಾತನಾಡಿ, ಪ್ಲಾಸ್ಟಿಕ್ ನಿಷೇಧ ಉತ್ತಮ. ಆದರೆ, ಅದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದರು. ಅನಂತರ ಜೆಸಿಐನ ಇನ್ನೊರ್ವ ಪದಾಧಿಕಾರಿ ನಾಗರಾಜ ಶೇಟ್ ಮಾತನಾಡಿ, ಪ್ಲಾಸ್ಟಿಕ್​​​ ಉತ್ಪಾದನೆಯನ್ನು ಸಂಪೂರ್ಣ ನಿಷೇಧಿಸಿದರೆ ಪ್ಲಾಸ್ಟಿಕ್​​​ ಬಳಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಕುರಿತು ಸರ್ಕಾರದ ಮಟ್ಟದಿಂದಲೇ ಕಾರ್ಯವಾಗಲಿ ಎಂದರು.

ABOUT THE AUTHOR

...view details