ಕರ್ನಾಟಕ

karnataka

ETV Bharat / state

ವಾರ್ತಾ ಇಲಾಖೆಯಿಂದ ನೇರ ಫೋನ್ ಇನ್:  ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ - Phone in Program from health authorities in Karwar

ಕಾರವಾರದಲ್ಲಿ ಇದೇ ಮೊದಲ ಬಾರಿಗೆ ವಾರ್ತಾ ಇಲಾಖೆಯಿಂದ ಆಯೋಜಿಸಿದ್ದ ನೇರ ಫೋನ್​ ಇನ್​ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾರ್ವಜನಿಕರು ಅಧಿಕಾರಿಗಳೊಂದಿಗೆ ತಮ್ಮ ಅಹವಾಲು ತೋಡಿಕೊಂಡು ಪರಿಹಾರ ಕಂಡುಕೊಂಡರು.

Phone in Program from health authorities in Karwar
ವಾರ್ತಾ ಇಲಾಖೆಯಿಂದ ನೇರ ಫೋನ್ ಇನ್

By

Published : Jan 10, 2020, 9:00 AM IST

ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಇದೇ ಮೊದಲ ಭಾರಿಗೆ ಆಯೋಜಿಸಿದ್ದ "ವಾರ್ತಾ ಸ್ಪಂದನ" ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಾರ್ತಾ ಇಲಾಖೆಯಿಂದ ನೇರ ಫೋನ್ ಇನ್

ನೇರವಾಗಿ ಪೋನ್ ಮೂಲಕ ಸಮಸ್ಯೆ ಹೇಳಿ ಪರಿಹಾರ ಕಂಡುಕೊಳ್ಳುವ ಕುರಿತು ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಉದ್ಘಾಟಿಸಿದರು. ಬಳಿಕ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ನೇರ ಫೋನ್‍ಇನ್ ನಲ್ಲಿ ಪಾಲ್ಗೊಂಡು ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಮ್ಮ ಅಹವಾಲುಗಳನ್ನು ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದರು. ಈ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಒಟ್ಟು 12 ಮಂದಿ ದೂರವಾಣಿ ಕರೆ ಮಾಡಿ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಅಧಿಕಾರಿಗ ಗಮನ ಸೆಳೆದರು. ಇದಕ್ಕೆ ಪೂರಕವಾಗಿ ಆರೋಗ್ಯಾಧಿಕಾರಿಗಳು ಪ್ರತಿಕ್ರಿಯಿಸಿದರು.

ಆರೋಗ್ಯ ಇಲಾಖೆಯ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ್ ರಾವ್, ಡಾ.ಶಂಕರ ರವ್, ಡಾ.ಮಹಾಬಲೇಶ್ವರ ಹೆಗಡೆ, ಡಾ.ವಿನೋದ ಭೂತೆ, ಡಾ.ಸತೀಶ್ ಶೇಟ್, ಡಾ.ಲಲಿತಾ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಉಪಸ್ಥಿತರಿದ್ದರು.

ABOUT THE AUTHOR

...view details