ಕರ್ನಾಟಕ

karnataka

ಬ್ಯಾಂಕ್​ ವಿಲೀನಕ್ಕೆ ವಿರೋಧ,ಕಾರವಾರದಲ್ಲಿ ಪ್ರತಿಭಟನೆ

By

Published : Oct 22, 2019, 1:17 PM IST

ಬ್ಯಾಂಕ್​ಗಳ ವಿಲೀನ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

sddsd

ಕಾರವಾರ: ಬ್ಯಾಂಕುಗಳ ವಿಲೀನ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬ್ಯಾಂಕ್​ ವಿಲೀನಕ್ಕೆ ವಿರೋಧ,ಕಾರವಾರದಲ್ಲಿ ಪ್ರತಿಭಟನೆ

ನಗರದ ಕಾರ್ಪೋರೇಶನ್ ಬ್ಯಾಂಕ್ ಕಚೇರಿ ಎದುರು ಸೇರಿದ ವಿವಿಧ ಬ್ಯಾಂಕ್ ನೌಕರರುಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಾಸುದೇವ ಶೇಟ್, ಬ್ಯಾಂಕ್ ವಿಲೀನ ಜನ ವಿರೋಧಿ ನೀತಿಯಾಗಿದೆ. ಕೂಡಲೇ ಪ್ರಸ್ತಾಪ ಕೈ ಬಿಡಬೇಕು ಎಂದು ಆಗ್ರಹಿಸಿದ್ರು.

ಶ್ರೀಮಂತ ಕೈಗಾರಿಕೋದ್ಯಮಿಗಳು ಉದ್ದೇಶಪೂರ್ವಕ ಸುಸ್ತಿಸಾಲದ ವಸೂಲಿಗೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬ್ಯಾಂಕ್ ಠೇವಣಿಗಳಿಗೆ ಆಕರ್ಷಕ ಬಡ್ಡಿದರ ನಿಗದಿಪಡಿಸಬೇಕು. ಬ್ಯಾಂಕ್ ಸೇವಾ ಶುಲ್ಕ ಏರಿಕೆ ನಿಲ್ಲಿಸಿ ಸಮರ್ಪಕ ಸಿಬ್ಬಂದಿ ನೇಮಕಾತಿ ನಡೆಸುವಂತೆ ಪ್ರತಿಭನಾಕಾರರು ಇದೇ ವೇಳೆ ಸರ್ಕಾರವನ್ನು ಒತ್ತಾಯಿಸಿದ್ರು.

For All Latest Updates

ABOUT THE AUTHOR

...view details