ಕಾರವಾರ: ಬಸ್ನಲ್ಲಿ ಕಿಟಕಿಯಿಂದ ಕೈ ಹೊರಚಾಚಿ ಪ್ರಯಾಣಿಸುತ್ತಿದ್ದ ವೃದ್ಧನೋರ್ವನ ಕೈ ತುಂಡಾಗಿದೆ. ಈ ಭಯಾನಕ ಘಟನೆ ತಾಲೂಕಿನ ಕದ್ರಾದಲ್ಲಿ ಜರುಗಿದೆ. ಅಣಶಿ ಮೂಲದ ಲಕ್ಷ್ಮಣ ಪಿ. ರಾಜುಗಾರ (74) ಗಂಭೀರ ಗಾಯಗೊಂಡ ವೃದ್ಧ. ಕಾರವಾರ-ಬೆಳಗಾವಿ ಮಾರ್ಗದ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈತ ಬಸ್ ಕಿಟಕಿಯಿಂದ ಕೈ ಹೊರಚಾಚಿದ್ದಾನೆ. ಪರಿಣಾಮ ಎದುರಿನಿಂದ ಬಂದ ಲಾರಿ ಕೈ ಯನ್ನು ಉಜ್ಜಿಕೊಂಡು ಹೋಗಿದೆ.
ಕಾರವಾರ: ಬಸ್ ಕಿಟಕಿಯಿಂದ ಕೈ ಹೊರಹಾಕಿ ಕುಳಿತಿದ್ದ ವೃದ್ಧನ ಕೈ ಕಟ್ - ಕಾರವಾರದಲ್ಲಿ ವೃದ್ಧನ ಕೈ ತುಂಡು
ಕಾರವಾರ-ಬೆಳಗಾವಿ ಮಾರ್ಗದ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವೃದ್ಧನೋರ್ವ ಬಸ್ ಕಿಟಕಿಯಿಂದ ಕೈ ಹೊರಚಾಚಿದ್ದಾನೆ. ಪರಿಣಾಮ ಎದುರಿನಿಂದ ಬಂದ ಲಾರಿ ಕೈಯನ್ನು ಉಜ್ಜಿಕೊಂಡು ಹೋಗಿದೆ.
![ಕಾರವಾರ: ಬಸ್ ಕಿಟಕಿಯಿಂದ ಕೈ ಹೊರಹಾಕಿ ಕುಳಿತಿದ್ದ ವೃದ್ಧನ ಕೈ ಕಟ್ ಬಸ್ ಕಿಟಕಿಯಿಂದ ಕೈ ಹೊರಹಾಕಿ ಕುಳಿತಿದ್ದ ವೃದ್ಧನ ಕೈ ತುಂಡು](https://etvbharatimages.akamaized.net/etvbharat/prod-images/768-512-14863862-thumbnail-3x2-nin.jpg)
ಬಸ್ ಕಿಟಕಿಯಿಂದ ಕೈ ಹೊರಹಾಕಿ ಕುಳಿತಿದ್ದ ವೃದ್ಧನ ಕೈ ತುಂಡು
ಇದನ್ನೂ ಓದಿ: ಮತ್ತೆ ಸಾರಿಗೆ ನೌಕರರ ಪ್ರತಿಭಟನೆ: ನಾಲ್ಕು ನಿಗಮಗಳ ವಿಲೀನಕ್ಕೆ ಒತ್ತಾಯ
ಘಟನೆ ಪರಿಣಾಮ ಕೈ ಎಲುಬು ತುಂಡಾಗಿ ಮಾಂಸ ಕಿತ್ತುಬಂದು ಬಸ್ನ ಕಿಟಕಿ ಭಾಗದಲ್ಲಿ ನೇತಾಡತೊಡಗಿತ್ತು. ಈ ವೇಳೆ ಬಸ್ ನಿಲ್ಲಿಸಿ ತಕ್ಷಣ ವೃದ್ಧನನ್ನು ಕೆಳಗಿಳಿಸಿ ಆ್ಯಂಬುಲೆನ್ಸ್ ಮೂಲಕ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
ಕಾರವಾರದಲ್ಲಿ ವೃದ್ಧನ ಕೈ ತುಂಡು