ಕರ್ನಾಟಕ

karnataka

ETV Bharat / state

ಹೈಕೋರ್ಟ್ ತೀರ್ಪು ಕುರಿತು ಮುಸ್ಲಿಂ ಮುಖಂಡರು ಹೇಳಿದ್ದೇನು? - ಹೈಕೋರ್ಟ್ ತೀರ್ಪು ವಿರೋಧಿಸಿ  ಭಟ್ಕಳದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿದ ಮುಸ್ಲಿಂ ಅಂಗಡಿಕಾರರು

ಹಿಜಾಬ್​ನ್ನು ತಮ್ಮ ನಂಬಿಕೆ ಮತ್ತು ಅಸ್ಮಿತೆಯ ಅವಿಭಾಜ್ಯ ಅಂಗ. ಇಂದು ದೇಶದ ಮುಸ್ಲಿಂ ಮಹಿಳೆಯರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಮುಸ್ಲಿಂ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

Muslim shopkeepers shutting down shop in Bhatka
ಸಂವಿಧಾನಿಕ ಮೌಲ್ಯಗಳ ವಿರುದ್ಧದ ತೀರ್ಪು:ಇಮ್ರಾನ ಲಂಕಾ

By

Published : Mar 15, 2022, 11:02 PM IST

ಉತ್ತರ ಕನ್ನಡ(ಭಟ್ಕಳ): ಹಿಜಾಬ್ ನಿಷೇಧದ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ಚಿನ್ನದ ಪಳ್ಳಿಯ ಇಮ್ರಾನ್​ ಅವರು ಮೌಲಾನ ಅಬ್ದುಲ್​ ಅಲೀಂ ಖತೀಬಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂವಿಧಾನಿಕ ಮೌಲ್ಯಗಳ ವಿರುದ್ಧದ ತೀರ್ಪು:ಇಮ್ರಾನ್​ ಲಂಕಾ

ಜಾಲಿ ಪಟ್ಟಣ ಪಂಚಾಯತ್​ ಸದಸ್ಯ ಇಮ್ರಾನ ಲಂಕಾ ಮಾತನಾಡಿ, ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂದು ಮುಸ್ಲಿಂ ವಿದ್ಯಾರ್ಥಿನಿಯರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿರುವುದು ತೀವ್ರ ನಿರಾಶದಾಯಕವಾಗಿದೆ ಎಂದರು.

ಹಿಜಾಬ್​ನ್ನು ತಮ್ಮ ನಂಬಿಕೆ ಮತ್ತು ಅಸ್ಮಿತೆಯ ಅವಿಭಾಜ್ಯ ಅಂಗವಾಗಿ ನಂಬುವ ದೇಶದ ಮುಸ್ಲಿಂ ಮಹಿಳೆಯರ ಭಾವನೆಗಳಿಗೆ ಧಕ್ಕೆಯಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಸ್ವೀಕರಿಸಲಾಗದು ಎಂದು ಹೇಳಿದರು.

ತಂಜಿಮ್ ಕಚೇರಿಗೆ ಬಿಡುವು, ಬಂದ್​​ಗೆ ಕರೆ:ಹಿಜಾಬ್​​​ ಕುರಿತಾದ ತೀರ್ಪು ಬಂದ ಹಿನ್ನೆಲೆ ಭಟ್ಕಳ ತಂಜೀಮ್​​ ಬುಧವಾರ ಕಾರ್ಯನಿರ್ವಹಿಸುವುದಿಲ್ಲ. ನಮ್ಮ ಇತರ ಸದಸ್ಯರು ಕೂಡ ಅವರ ಅಂಗಡಿ ಮುಂಗಟ್ಟುಗಳನ್ನು ಬಂದ್​​ ಮಾಡಲಿದ್ದಾರೆ. ನಾವು ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ಸ್ವ ಇಚ್ಛಯಿಂದ ಬಂದ್​​ ಮಾಡಲು ಬಯಿಸಿದ್ರೆ, ಅವರು ಮಾಡಬಹುದು ಎಂದು ಹೇಳಿದರು.

ಇದನ್ನೂ ಓದಿ:ದೊಡ್ಡಬಳ್ಳಾಪುರ: ಪೂಜಾ ಸಾಮಗ್ರಿ ತರಲು ಹೋಗಿದ್ದ ತಂದೆ-ಮಗ ರಸ್ತೆ ಅಪಘಾತದಲ್ಲಿ ದುರ್ಮರಣ

For All Latest Updates

ABOUT THE AUTHOR

...view details