ಕರ್ನಾಟಕ

karnataka

ETV Bharat / state

ಒಳ ಮೀಸಲಾತಿ ಎಂಬುವುದು ಅತಿ ಮೀಸಲಾತಿ : ಮುರುಘಾ ಶ್ರೀ - ಒಳ ಮೀಸಲಾತಿಗೆ ಮುರುಘಾ ಶ್ರೀ ವಿರೋಧ

ಮೀಸಲಾತಿ ಎನ್ನುವುದು ಸಂವಿಧಾನ ಬದ್ಧ ಹಕ್ಕಾಗಿದೆ. ನಮ್ಮ ರಾಷ್ಟ್ರದ ಸಂವಿಧಾನ ಎಲ್ಲಾ ಜನಾಂಗದವರಿಗೂ ಸ್ವಾಭಿಮಾನ ಹಾಗೂ ಅವಕಾಶ ನೀಡಿದೆ..

Muruga Shri statement against inner reservation
ಒಳ ಮೀಸಲಾತಿ ವಿರುದ್ಧ ಮುರುಘಾ ಶ್ರೀ ಹೇಳಿಕೆ

By

Published : Feb 22, 2021, 5:16 PM IST

Updated : Feb 22, 2021, 6:34 PM IST

ಶಿರಸಿ : ಮೀಸಲಾತಿ ಇಂದು ಹೊಸ ಸ್ವರೂಪ ಪಡೆದಿದೆ. ಮೀಸಲಾತಿಯಲ್ಲಿನ ಒಳ ಮೀಸಲಾತಿ ಇಂದು ಅತಿ ಮೀಸಲಾತಿಯಾಗಿದೆ ಎಂದು ಚಿತ್ರದುರ್ಗ ಮುರುಘಾಮಠದ ಶಿವಯೋಗಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಶಿರಸಿಯ ಶ್ರದ್ಧಾನಂದ ಗಲ್ಲಿಯಲ್ಲಿ ನಡೆದ ಮಾರುತಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಕೇಳುತ್ತಿರುವ ಒಳ ಮೀಸಲಾತಿ ಅತಿ ಮೀಸಲಾತಿಯಾಗಿದೆ. ಅತಿ ಮೀಸಲಾತಿಯ ಕಾಲದಲ್ಲಿ ನಾವೆಲ್ಲರೂ ಇದ್ದೇವೆ ಎಂದರು.‌

ಮುರುಘಾಮಠದ ಮುರುಘರಾಜೇಂದ್ರ ಸ್ವಾಮೀಜಿ..

ಓದಿ : ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ಕೊಡಿ, ತಪ್ಪೇನಿಲ್ಲ.. ಮಾಜಿ ಸಿಎಂ ಸಿದ್ದರಾಮಯ್ಯ

ಮೀಸಲಾತಿ ಎನ್ನುವುದು ಸಂವಿಧಾನ ಬದ್ಧ ಹಕ್ಕಾಗಿದೆ. ನಮ್ಮ ರಾಷ್ಟ್ರದ ಸಂವಿಧಾನ ಎಲ್ಲಾ ಜನಾಂಗದವರಿಗೂ ಸ್ವಾಭಿಮಾನ ಹಾಗೂ ಅವಕಾಶ ನೀಡಿದೆ ಎಂದು ಹೇಳುವ ಮೂಲಕ ಒಳ ಮೀಸಲಾತಿಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Last Updated : Feb 22, 2021, 6:34 PM IST

ABOUT THE AUTHOR

...view details