ಶಿರಸಿ(ಉತ್ತರ ಕನ್ನಡ):ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ಶಿರಸಿ ತಾಲೂಕಿನ ಭಾಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಭಕ್ತಾದಿಗಳೊಂದಿಗೆ ಕೆಂಡ ಹಾಯ್ದರು.
ಬನವಾಸಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಕೆಂಡ ಹಾಯ್ದ ಸಚಿವ ಶಿವರಾಮ ಹೆಬ್ಬಾರ್ - Shree Veerabhadreshwara temple
ನಾಗಚೌಡೇಶ್ವರಿ ನೂತನ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಶಿವರಾಮ ಹೆಬ್ಬಾರ್ ಹರಕೆಗೆಂದು ವ್ಯವಸ್ಥೆ ಮಾಡಲಾಗಿದ್ದಲ್ಲಿ ಕೆಂಡ ಹಾಯ್ದರು.

ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಕೆಂಡ ಹಾಯ್ದರು
ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಕೆಂಡ ಹಾಯ್ದರು
ಭಾಶಿಯ ಶ್ರೀ ವೀರಭದ್ರೇಶ್ವರ ಹಾಗೂ ನಾಗಚೌಡೇಶ್ವರಿ ನೂತನ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಪಕ್ಕದಲ್ಲಿ ಹರಕೆ ಸಲ್ಲಿಸುವವರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ಕೆಂಡದಲ್ಲಿ ಯಾವುದೇ ಅಳುಕಿಲ್ಲದೆ ಕೆಂಡ ನಡೆದರು. ಹಲವಾರು ಬಾರಿ ಯುವಕರನ್ನು ನಾಚಿಸುವಂತೆ ಅವರು ತೋರುವ ಉತ್ಸಾಹ ಹಾಗೂ ಸಾಹಸ ಸಚಿವರ ಕಾರ್ಯ ಕ್ಷೇತ್ರದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ:ತಿಹಾರ್, ಪರಪ್ಪನ ಆಗ್ರಹಾರ ಜೈಲಿಗಾದ್ರೂ ಹಾಕಲಿ ನಾನು ಹೆದರಲ್ಲ: ಡಿ.ಕೆ.ಶಿವಕುಮಾರ್