ಶಿರಸಿ: ಪಕ್ಷದ ಅಡಿಯಲ್ಲಿ ಬರುವವರು ಬಹಿರಂಗವಾಗಿ ಮಾತನಾಡದೇ ಪಕ್ಷದಲ್ಲಿ ಚರ್ಚಿಸಿ, ನಮ್ಮ ಮಾತುಗಳು ನಾಲ್ಕು ಗೋಡೆಗಳ ಮಧ್ಯೆ ಇರಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಕಿವಿಮಾತು ಹೇಳಿದ್ದಾರೆ.
'ಬಹಿರಂಗ ಹೇಳಿಕೆ ಬಿಟ್ಟು ಸಿಎಂ, ರಾಜ್ಯಾಧ್ಯಕ್ಷರ ಬಳಿ ಮಾತನಾಡಿ' - Minister Jagadish Shettar
ಪಕ್ಷದ ಹಿತದೃಷ್ಟಿಯಿಂದ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಹೆಚ್.ವಿಶ್ವನಾಥ್ ಹಾಗೂ ಸಿ.ಪಿ.ಯೋಗೇಶ್ವರ್ಗೆ ಸಚಿವ ಜಗದೀಶ ಶೆಟ್ಟರ್ ಕಿವಿಮಾತು ಹೇಳಿದ್ದಾರೆ.
!['ಬಹಿರಂಗ ಹೇಳಿಕೆ ಬಿಟ್ಟು ಸಿಎಂ, ರಾಜ್ಯಾಧ್ಯಕ್ಷರ ಬಳಿ ಮಾತನಾಡಿ' dsd](https://etvbharatimages.akamaized.net/etvbharat/prod-images/768-512-9747807-thumbnail-3x2-vis.jpg)
ಮಾಜಿ ಸಚಿವ ಹೆಚ್.ವಿಶ್ವನಾಥ್ ಹಾಗೂ ಸಿ.ಪಿ.ಯೋಗೇಶ್ವರ್ ಬಹಿರಂಗ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಅವರ ವಿಚಾರ ಹೇಳಲು ಅವಕಾಶವಿದೆ. ಯಾವುದೇ ವಿಷಯಕ್ಕೆ ಬೇಸರವಿದ್ದಲ್ಲಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳಿಗೆ ತಿಳಿಸಲಿ. ಅವರು ವಿಶ್ವನಾಥ್ ಇರಲಿ ಅಥವಾ ಮತ್ತೊಬ್ಬರಿರಲಿ. ಸಂಯಮ ಕಾಯ್ದುಕೊಂಡು ಹೋಗಬೇಕು ಎಂದರು.
ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆ 5-6 ತಂಡಗಳನ್ನು ರಚನೆ ಮಾಡಿಕೊಂಡು 4 ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲಾಗುತ್ತಿದೆ. ಬಿಜೆಪಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಶಾಸಕರ, ಸಂಸದರ ಚುನಾವಣೆಗೆ ನೀಡಿದಷ್ಟೇ ಮಹತ್ವ ನೀಡಲಾಗಿದೆ. ಆ ಕಾರಣಕ್ಕೆ ಸಮಾವೇಶ ನಡೆಸಿ ಕಾರ್ಯಕರ್ತರಿಗೆ ಸ್ಫೂರ್ತಿ, ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು.