ಕರ್ನಾಟಕ

karnataka

By

Published : Apr 20, 2020, 11:05 PM IST

ETV Bharat / state

ಭಟ್ಕಳದ ಆಟೋ - ಟ್ಯಾಕ್ಸಿ ಚಾಲಕರಿಗೆ ಜೀವನಾವಶ್ಯಕ ಕಿಟ್​ ವಿತರಿಸಿದ ಮಂಕಾಳ ವೈದ್ಯ

ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಗೂಡ್ಸ ರಿಕ್ಷಾ ಚಾಲಕರಿಗಾಗಿ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಅವರು ಸುಮಾರು 2,000 ಕ್ಕೂ ಹೆಚ್ಚು ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಿದರು.

Mankala vaidya , who supplies life-saving kit to Bhatkal's auto-taxi driver
ಭಟ್ಕಳದ ಆಟೋ-ಟ್ಯಾಕ್ಸಿ ಚಾಲಕರಿಗೆ ಜೀವನಾವಶ್ಯಕ ಕಿಟ್​ ವಿತರಿಸಿದ ಮಂಕಾಳ ವೈದ್ಯ

ಉತ್ತರ ಕನ್ನಡ/ಭಟ್ಕಳ: ಲಾಕ್​​ಡೌನ್​ ಜಾರಿಯಾದ ಬಳಿಕ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಕೆಲಸವೇ ಇಲ್ಲದಾಗಿದೆ. ಪ್ರಯಾಣಿಕರನ್ನೇ ನಂಬಿ ರಸ್ತೆಗಿಳಿಯುತ್ತಿದ್ದ ಇವರು ಲಾಕ್​ಡೌನ್​ನಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆ ಭಟ್ಕಳದ 2 ಸಾವಿರ ಆಟೋ ರಿಕ್ಷಾ ಚಾಲಕರಿಗೆ ಮಾಜಿ ಶಾಸಕ ಮಂಕಾಳ ವೈದ್ಯ ದಿನಸಿ ಕಿಟ್​ಗಳನ್ನು ನೀಡಿ ನೆರವಾಗಿದ್ದಾರೆ.

ತಾಲೂಕಿನ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಗೂಡ್ಸ್​​ ರಿಕ್ಷಾ ಚಾಲಕರಿಗಾಗಿ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಅವರು ಸುಮಾರು 2,000 ಕ್ಕೂ ಹೆಚ್ಚು ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಿದರು. ಈ ವೇಳೆ, ಮಾತನಾಡಿದ ಅವರು, ಕಳೆದ 27 ದಿನಗಳಿಂದ ದುಡಿಮೆಯಿಲ್ಲದೇ ಮನೆಯಲ್ಲಿಯೇ ಇರುವ ಚಾಲಕರು ತೀವ್ರ ಸಂಕಷ್ಟದಲ್ಲಿರುವುದನ್ನು ಅರಿತು ಅವರಿಗೆ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಿದ್ದೇನೆ ಎಂದರು.

ABOUT THE AUTHOR

...view details