ಕಾರವಾರ: ಕಂಟೇನರ್ ಹಾಗೂ ಲಾರಿ ನಡುವೆ ಡಿಕ್ಕಿಯಾದ ರಭಸಕ್ಕೆ ಲಾರಿ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತಂಡ್ರಕುಳಿ ಗ್ರಾಮದ ಬಳಿ ನಡೆದಿದೆ. ಹೊನ್ನಾವರ ಕಡೆಯಿಂದ ಅಂಕೋಲಾ ಕಡೆ ಅನನಾಸು ತುಂಬಿಕೊಂಡು ಸಾಗುತ್ತಿದ್ದ ಲಾರಿ ಹಾಗೂ ಎದುರಿನಿಂದ ಬಂದ ಕಂಟೇನರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಿಕ್ಕಿ ರಭಸಕ್ಕೆ ಕಂದಕಕ್ಕೆ ಉರುಳಿದ ಲಾರಿಗೆ ಬೆಂಕಿ; ಅದೃಷ್ಟವಶಾತ್ ಚಾಲಕ-ಕ್ಲೀನರ್ ಪಾರು - karwar road accident
ಲಾರಿ ಮತ್ತು ಕಂಟೇನರ್ ಪರಸ್ಪರ ಡಿಕ್ಕಿಯಾಗಿ, ಲಾರಿ ಕಂದಕಕ್ಕೆ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿಯಲ್ಲಿದ್ದ ಹಣ್ಣು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![ಡಿಕ್ಕಿ ರಭಸಕ್ಕೆ ಕಂದಕಕ್ಕೆ ಉರುಳಿದ ಲಾರಿಗೆ ಬೆಂಕಿ; ಅದೃಷ್ಟವಶಾತ್ ಚಾಲಕ-ಕ್ಲೀನರ್ ಪಾರು lorry-and-container-accident-in-karwar](https://etvbharatimages.akamaized.net/etvbharat/prod-images/768-512-14883033-thumbnail-3x2-yy.jpg)
ಡಿಕ್ಕಿ ರಭಸಕ್ಕೆ ಕಂದಕಕ್ಕೆ ಉರುಳಿದ ಲಾರಿಗೆ ಬೆಂಕಿ; ಅದೃಷ್ಟವಶಾತ್ ಚಾಲಕ ಕ್ಲೀನರ್ ಪಾರು!
ಡಿಕ್ಕಿ ರಭಸಕ್ಕೆ ಕಂದಕಕ್ಕೆ ಉರುಳಿದ ಲಾರಿಗೆ ಬೆಂಕಿ
ಘಟನೆ ಬಳಿಕ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಲಾರಿಗೆ ಹೊತ್ತಿದ ಬೆಂಕಿಯನ್ನು ನಂದಿಸಿದ್ದಾರೆ. ಆದರೂ ಕೂಡ ಲಾರಿ ಬಹುಭಾಗ ಸುಟ್ಟು ಕರಕಲಾಗಿದ್ದು, ಅನಾನಸ್ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿವೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ :ಬೀಗ ಹಾಕಿದ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರ ಶವ ಪತ್ತೆ; ಕೊಲೆ ಶಂಕೆ