ಕರ್ನಾಟಕ

karnataka

ETV Bharat / state

ಕೆಟ್ಟು ನಿಂತಿದ್ದ ಬಸ್​ಗೆ ಗುದ್ದಿದ ಲಾರಿ: ನಾಲ್ವರು ಆಶಾ ಕಾರ್ಯಕರ್ತೆಯರಿಗೆ ಗಂಭೀರ ಗಾಯ - ನಾಲ್ವರು ಆಶಾ ಕಾರ್ಯಕರ್ತೆಯರು ಗಾಯ

ಕೆಟ್ಟು ನಿಂತಿದ್ದ ಕೆಎಸ್ಆರ್​ಟಿಸಿ ಬಸ್ ಗೆ ಲಾರಿ ಗುದ್ದಿದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಮಟ ತಾಲೂಕಿನ ಬರ್ಗಿಯಲ್ಲಿ ನಡೆದಿದೆ.

kn_kwr_02_accident in kumta_7302800
ಕೆಟ್ಟು ನಿಂತ ಬಸ್ ಗೆ ಗುದ್ದಿದ ಲಾರಿ, ನಾಲ್ವರು ಆಶಾ ಕಾರ್ಯಕರ್ತೆಯರಿಗೆ ಗಂಭೀರ ಗಾಯ

By

Published : Jan 27, 2020, 7:07 PM IST

ಕಾರವಾರ:ಕೆಟ್ಟು ನಿಂತಿದ್ದ ಕೆಎಸ್​ಆರ್​ಟಿಸಿ ಬಸ್ ಗೆ ಲಾರಿ ಗುದ್ದಿದ ಪರಿಣಾಮ ನಾಲ್ಕು ಮಂದಿ ಅಂಗನವಾಡಿ ಕಾರ್ಯಕರ್ತೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಮಟ ತಾಲೂಕಿನ ಬರ್ಗಿಯಲ್ಲಿ ನಡೆದಿದೆ.

ಬಸ್ ಕೆಟ್ಟು ನಿಂತ ಕಾರಣ ಇನ್ನೊಂದು ಬಸ್​ಗಾಗಿ ಕಾಯುತ್ತಿದ್ದಾಗ ಅಂಕೋಲಾ ಕಡೆಯಿಂದ ಯಮನಂತೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸಿದ್ದಾಪುರ ಮೂಲದ ಈ ನಾಲ್ವರು ಆಶಾ ಕಾರ್ಯಕರ್ತೆಯರು ಗಾಯಗೊಂಡಿದ್ದಾರೆ. ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಅಪಘಾತದ ತೀವ್ರತೆಗೆ ಲಾರಿ ಹೊಂಡಕ್ಕೆ ಉರುಳಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details