ಕರ್ನಾಟಕ

karnataka

By

Published : Mar 24, 2020, 2:45 PM IST

ETV Bharat / state

ಲಾಕ್​ಡೌನ್ ಆದೇಶಕ್ಕೆ ಕಾರವಾರದಲ್ಲಿ ಜನರಿಂದ ಬೆಂಬಲ

ರಾಜ್ಯ ಸರ್ಕಾರ ಕರೆಕೊಟ್ಟಿರುವ ಲಾಕ್​ಡೌನ್​ಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

Karawara giving complete support for lockdown
ಕಾರವಾರ: ಲಾಕ್​ಡೌನ್​ಗೆ ಕಾರವಾರದಲ್ಲಿ ಸಂಪೂರ್ಣ ಬೆಂಬಲ

ಕಾರವಾರ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರೆಕೊಟ್ಟಿರುವ ಲಾಕ್​ಡೌನ್​ಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಜಿಲ್ಲಾ ಕೇಂದ್ರ ಕಾರವಾರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಅವಶ್ಯವಿರುವ ಹಾಲು, ತರಕಾರಿ, ಕಿರಾಣಿ ಅಂಗಡಿಗಳನ್ನು ತೆರೆಯಲಾಗಿದೆ. ಆದರೆ ಕೆಲ ಬೇಕರಿ ಮಾಲೀಕರು ಬೆಳಗ್ಗೆಯೇ ಅಂಗಡಿಗಳನ್ನು ತೆರೆದಿದ್ದು, ಅಕ್ಕ ಪಕ್ಕದ ಅಂಗಡಿಗಳು ಬಂದ್ ಆಗಿರುವುದನ್ನು ನೋಡಿ ಮತ್ತೆ ಅವರು ಸಹ ಬಾಗಿಲು ಮುಚ್ಚಿದರು.

ಲಾಕ್​ಡೌನ್​ಗೆ ಕಾರವಾರದಲ್ಲಿ ಜನ ಬೆಂಬಲ

ಉಳಿದಂತೆ ನಗರದಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿದೆ. ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಆದರೆ ಅಲ್ಲಲ್ಲಿ ಆಟೋಗಳು ಸಂಚಾರ ನಡೆಸಿದ್ದು, ಹೂವು ಹಣ್ಣಿನ ಅಂಗಡಿಗಳನ್ನು ಸಹ ತೆರೆಯಲಾಗಿದೆ.

ಕೊರೊನಾ ವೈರಸ್ ತಡೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್, ಜನರು ಸ್ವಯಂ ಪ್ರೇರಿತರಾಗಿ ಸೋಂಕು ತಡೆಯಲು ಸಹಕಾರ ನೀಡಬೇಕು. ಅನಾವಶ್ಯಕವಾಗಿ ಓಡಾಡಬಾರದು, ಅವಶ್ಯವಲ್ಲದ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಮನವಿ ಮಾಡಿದ್ದರು. ಅಲ್ಲದೇ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ABOUT THE AUTHOR

...view details