ಕರ್ನಾಟಕ

karnataka

ಅಕ್ರಮವಾಗಿ ಜಾನುವಾರು ಸಾಗಾಟ: ವಾಹನ ಸಮೇತ ನಾಲ್ವರು ವಶಕ್ಕೆ

ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿ, ಜಾನುವಾರುಗಳನ್ನು ರಕ್ಷಿಸಿದ ಘಟನೆ ಹೊನ್ನಾವರ ತಾಲೂಕಿನ ಶೇಡಿಮುಲೆ ಕ್ರಾಸ್ ಬಳಿ ನಡೆದಿದೆ.

By

Published : Nov 6, 2020, 4:15 AM IST

Published : Nov 6, 2020, 4:15 AM IST

karawar crime
ಅಕ್ರಮವಾಗಿ ಜಾನುವಾರು ಸಾಗಾಟ: ವಾಹನ ಸಮೇತ ನಾಲ್ವರು ವಶಕ್ಕೆ

ಕಾರವಾರ: ಪರವಾನಗಿ ಇಲ್ಲದೆ ಬೊಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ 9 ಜಾನುವಾರುಗಳನ್ನು ರಕ್ಷಿಸಿ, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಹೊನ್ನಾವರ ತಾಲೂಕಿನ ಶೇಡಿಮುಲೆ ಕ್ರಾಸ್ ಬಳಿ ನಡೆದಿದೆ.


ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಸಂಚರಿಸುತ್ತಿದ್ದ ಬೊಲೆರೋ ವಾಹನದಲ್ಲಿ 3 ಹಸು, 4 ಹೋರಿ ಹಾಗೂ 2 ಕೋಣ ಸೇರಿ 9 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು.

ಶೇಡಿಮುಲೆ ಕ್ರಾಸ್ ಬಳಿ ಮಂಕಿ ಠಾಣಾ ಪಿಎಸ್‌ಐ ಪರಮಾನಂದ ಕೊಣ್ಣುರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, ವಾಹನದ ಜೊತೆ ಹುಂಡೈ ಕಂಪನಿಯ ಕ್ರೇಟಾ ಕಾರು, ಮೂರು ಮೊಬೈಲ್ ಹಾಗೂ 35,210 ನಗದನ್ನು ವಶಪಡಿಸಿಕೊಂಡಿದ್ದಾರೆ.


ಭಟ್ಕಳ ಮೂಲದ ಮೆಹಬೂಬಲಿ, ಸೈಯದ್ ಇಬ್ರಾಹಿಂ, ಸಿದ್ದಿಕಾ ಮಹಮ್ಮದ್ ಮಝಾರ, ಜುಕ್ವಾನ ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ABOUT THE AUTHOR

...view details