ಕರ್ನಾಟಕ

karnataka

ETV Bharat / state

ಬೂತ್​​ನಲ್ಲಿ ಕಾರ್ಯ ನಿರ್ವಹಿಸಲು ಹಣಕ್ಕೆ ಬೇಡಿಕೆಯಿಟ್ಟ ಜೆಡಿಎಸ್​ ಕಾರ್ಯಕರ್ತರು- ವಿಡಿಯೋ ವೈರಲ್​ - ಶಿರಸಿ ಜೆಡಿಎಸ್​ ಅಭ್ಯರ್ಥಿ ಚೈತ್ರಾ ಗೌಡ ಆರೋಪ   ಸುದ್ದಿ

ಮತದಾನದ ಸಂದರ್ಭದಲ್ಲಿ ಬೂತ್ ನಲ್ಲಿ ಕಾರ್ಯನಿರ್ವಹಿಸಲು ತಮ್ಮ ಪಕ್ಷದವರೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಯಲ್ಲಾಪುರ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಚೈತ್ರಾ ಗೌಡ ಆರೋಪಿಸಿದ್ದಾರೆ.

JDS candidate Chaitra Gowda
ಜೆಡಿಎಸ್​ ಅಭ್ಯರ್ಥಿ ಚೈತ್ರಾ ಗೌಡ

By

Published : Dec 4, 2019, 4:00 PM IST

ಶಿರಸಿ:ಮತದಾನದ ಸಂದರ್ಭದಲ್ಲಿ ಬೂತ್ ನಲ್ಲಿ ಕಾರ್ಯನಿರ್ವಹಿಸಲು ತಮ್ಮ ಪಕ್ಷದವರೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಯಲ್ಲಾಪುರ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಚೈತ್ರಾ ಗೌಡ ಆರೋಪಿಸಿದ್ದಾರೆ.

ಜೆಡಿಎಸ್​ ಅಭ್ಯರ್ಥಿ ಚೈತ್ರಾ ಗೌಡ ಆರೋಪ

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ತಾಲೂಕು ಅಧ್ಯಕ್ಷ ರವಿ ಚಂದ್ರ ನಾಯ್ಕ ದುಡ್ಡಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ದೂರಿದ್ದಾರೆ. ಪ್ರತಿ ಬೂತಿಗೆ 10 ಸಾವಿರದಂತೆ 2 ಲಕ್ಷಕ್ಕೂ ಅಧಿಕ ಹಣ ಜೆಡಿಎಸ್ ಅಭ್ಯರ್ಥಿಯಿಂದ ಬೇಡಿಕೆ ಇಟ್ಟಿದ್ದು ಜನ ಸೇರಿಸಲು, ಮತದಾನದ ದಿನ ಬೂತ್ ನಲ್ಲಿ ಕೆಲಸ ಮಾಡಲು ದುಡ್ಡಿನ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್​ ಆಗಿದೆ. ತಮ್ಮ ಬಳಿ ಹಣ ಬೇಡಿಕೆ ಇಟ್ಟಿರುವ ಕುರಿತು ಸ್ವತಃ ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಒಪ್ಪಿಕೊಂಡಿದ್ದಾರೆ.

ಜೆಡಿಎಸ್​ ಅಭ್ಯರ್ಥಿ ಚೈತ್ರಾ ಗೌಡ ಆರೋಪ

ಪಕ್ಷದಲ್ಲಿ ಜಿಲ್ಲಾಧ್ಯಕ್ಷರು ಸೇರಿದಂತೆ ತಾಲೂಕು ಅಧ್ಯಕ್ಷರು ಬಹಿರಂಗವಾಗಿ ಹಣ ನೀಡುವಂತೆ ಕೇಳಿದ್ದಾರೆ ಎಂದಿರುವ ಚೈತ್ರಾ ಗೌಡ ಅವರು ತಾನು ಪಕ್ಷೇತರ ಅಭ್ಯರ್ಥಿ ಎಂಬಂತೆ ಭಾಸವಾಗ್ತಿದೆ ಎಂದು ಹೇಳಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details