ಕರ್ನಾಟಕ

karnataka

ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಐವರು ಚಾಲಕರ ಬಂಧನ

By

Published : Jan 9, 2020, 9:30 PM IST

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 5 ಟಿಪ್ಪರ್ ವಾಹನ ವಶಪಡಿಸಿಕೊಂಡ ಪೊಲೀಸರು ಐವರು ಚಾಲಕರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

Illegal sand transfer case
ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ 5 ಜನ ಚಾಲಕರ ಬಂಧನ

ಉತ್ತರ ಕನ್ನಡ/ ಶಿರಸಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 5 ಟಿಪ್ಪರ್ ವಶಪಡಿಸಿಕೊಂಡ ಪೊಲೀಸರು ಐವರು ಚಾಲಕರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

ಜೋಯಿಡಾದ ಶಾಂತರಾಮ್(40), ಅಬ್ದುಲ್ (38), ಥಾಮಸ್(45), ಬಸವರಾಜ್ (41), ಹಾಗೂ ದೀಪಕ್(28) ಬಂಧಿತ ಆರೋಪಿಗಳು.

ಜೋಯಿಡಾದ ಜಗಲಪೇಟೆ ಬಳಿ 5 ಟಿಪ್ಪರ್​ನಲ್ಲಿ ಮರಳು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಜೋಯಿಡಾ ಹಾಗೂ ರಾಮನಗರ ಪೊಲೀಸರು ದಾಳಿ ನಡೆಸಿ ತಲಾ 50 ಮೆಟ್ರಿಕ್ ಟನ್​ನಂತೆ ಲಾರಿಯಲ್ಲಿದ್ದ ಅಕ್ರಮ ಮರಳು ವಶಕ್ಕೆ ಪಡೆದಿದ್ದಾರೆ.

ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details