ಕರ್ನಾಟಕ

karnataka

ETV Bharat / state

ಕಾಡು ಪ್ರಾಣಿಗಳ ಬೇಟೆ: ಓರ್ವನ ಬಂಧನ, ಹಲವರು ಪರಾರಿ

ಕಾಡು ಪ್ರಾಣಿಗಳನ್ನು ಬೇಟೆಯಾಡಿ ವಾಪಸ್​ ಬರುತ್ತಿದ್ದ ಗುಂಪೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿದ್ದು, ಹಲವರು ಪರಾರಿಯಾದ ಘಟನೆ ಕುಮಟಾ ತಾಲೂಕಿನ ಹಿರೆಗುತ್ತಿಯ ಎಣ್ಣೆಮಡಿಯಲ್ಲಿ ನಡೆದಿದೆ.

By

Published : Nov 4, 2019, 9:33 AM IST

ಕಾಡು ಪ್ರಾಣಿಗಳ ಬೇಟೆ: ಓರ್ವನ ಬಂಧನ

ಕಾರವಾರ:ಕಾಡು ಪ್ರಾಣಿಗಳನ್ನು ಬೇಟೆಯಾಡಿ ವಾಪಸ್​ ಬರುತ್ತಿದ್ದ ಗುಂಪೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿದ್ದು, ಹಲವರು ಪರಾರಿಯಾದ ಘಟನೆ ಕುಮಟಾ ತಾಲೂಕಿನ ಹಿರೆಗುತ್ತಿಯ ಎಣ್ಣೆಮಡಿಯಲ್ಲಿ ನಡೆದಿದೆ.

ಕಾಡು ಪ್ರಾಣಿಗಳ ಬೇಟೆ: ಓರ್ವನ ಬಂಧನ, ಹಲವರು ಪರಾರಿ

ಬಂಧಿತನನ್ನು ಬೊಮ್ಮಯ್ಯ ಎಂದು‌ ಗುರುತಿಸಲಾಗಿದೆ. ಈತನ ಜೊತೆ ಸುಮಾರು 20ಕ್ಕೂ ಹೆಚ್ಚು ಜನರು ಬೇಟೆಯಾಡಲು ಹತ್ತಿರದ ಕಾಡಿಗೆ ತೆರಳಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮೃತಪಟ್ಟ ಬರ್ಕಾ ಮತ್ತು ಕಾಡುಕುರಿ ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಕಳೆದ ಕೆಲ ದಿನಗಳಿಂದ ಪ್ರಾಣಿಗಳನ್ನು ಬೇಟೆಯಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ.

ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details