ಕರ್ನಾಟಕ

karnataka

By

Published : Sep 12, 2019, 11:58 AM IST

Updated : Sep 12, 2019, 12:04 PM IST

ETV Bharat / state

ಕೊಡಸಳ್ಳಿ ಜಲಾಶಯ ಬಳಿ ಗುಡ್ಡ ಕುಸಿತ... ಡ್ಯಾಮ್​ ಮೇಲ್ಭಾಗದ ರಸ್ತೆಯಲ್ಲಿ ಬಿರುಕು!

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಜಲಾಶಯದ ಮೇಲ್ಭಾಗದಲ್ಲಿ ಗುಡ್ಡ ಕುಸಿದಿದೆ.

ಕೊಡಸಳ್ಳಿ ಜಲಾಶಯದ ಮೇಲ್ಬಾಗದ ಗುಡ್ಡ ಕುಸಿತ..ಡ್ಯಾಂನ ಮೇಲ್ಬಾಗದ ರಸ್ತೆಯ ಹಲವು ಭಾಗದಲ್ಲಿ ಬಿರುಕು

ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಜಲಾಶಯದ ಮೇಲ್ಭಾಗದ ಗುಡ್ಡ ಕುಸಿದಿದೆ.

ಕೊಡಸಳ್ಳಿ ಜಲಾಶಯ ಬಳಿ ಗುಡ್ಡ ಕುಸಿತ... ಡ್ಯಾಮ್​ ಮೇಲ್ಭಾಗದ ರಸ್ತೆಯಲ್ಲಿ ಬಿರುಕು!

ಗುಡ್ಡ ಕುಸಿತದಿಂದ ಜಲಾಶಯದ ಮೇಲ್ಭಾಗಕ್ಕೆ ಹಾನಿಯಾಗಿದ್ದು, ಜೋಯಿಡಾ ಭಾಗದ ಬಿರ್ಕೊಲ ಗ್ರಾಮಕ್ಕೆ ಹೋಗುವ ಡ್ಯಾಮ್​ನ ಮೇಲ್ಭಾಗದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಡ್ಯಾಮ್​ನಲ್ಲಿ 27,754.00 ಕ್ಯೂಸೆಕ್​ ಒಳಹರಿವು ಹಾಗೂ 24,165.0 ಕ್ಯೂಸೆಕ್​ ಹೊರಹರಿವು ಇದೆ. ಕಳೆದ 24 ಗಂಟೆಯಲ್ಲಿ 20 ಮೀ.ಮೀ ಮಳೆಯಾಗಿದ್ದು, ಇನ್ನೂ ಹೆಚ್ಚಿನ ಮಳೆಯಾದಲ್ಲಿ ಡ್ಯಾಮ್​ಗೆ ತೊಂದರೆಯಾಗುವ ಸಾಧ್ಯತೆಗಳಿವೆ.

ಈಗಾಗಲೇ ಜಲಾಶಯದ ಭಾಗ ಅಪಾಯದಲ್ಲಿದ್ದು, ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್​ ಅಧಿಕಾರಿಗಳು ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದಾರೆ.

Last Updated : Sep 12, 2019, 12:04 PM IST

ABOUT THE AUTHOR

...view details