ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ.
ಅಂಕೋಲಾ: ಎರಡು ದಿನ ಸುರಿದ ಮುಂಗಾರು ಮಳೆಗೆ ಕಣ್ಣೀರಾದ ಬದುಕು - ಅಂಕೋಲಾ ತಾಲ್ಲೂಕಿನ ಗ್ರಾಮೀಣ ಪ್ರದೇಶ
ಅಂಕೋಲಾ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ ನದಿಭಾಗ್, ಬೊಬ್ರುವಾಡ್ ಹಾಗೂ ಖಾರ್ವಿವಾಡಗಳಲ್ಲಿ ಭಾರಿ ಮಳೆ ಸುರಿದಿದೆ. ಪರಿಣಾಮ ನೆರೆ ಸೃಷ್ಟಿಯಾಗಿ ನೂರಾರು ಜನರ ಬದುಕು ಮೂರಾಬಟ್ಟೆಯಾಗಿದೆ.

ಅಂಕೋಲಾದಲ್ಲಿ ನೆರೆತಂದ ಅವಾಂತರ, ಎರಡು ದಿನದ ಮಳೆಗೇ ಕಣ್ಣೀರಾದ ಬದುಕು!
ಅಂಕೋಲಾ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ ನದಿಭಾಗ್, ಬೊಬ್ರುವಾಡ್ ಹಾಗೂ ಖಾರ್ವಿವಾಡಗಳಲ್ಲಿ ಮಳೆ ನೆರೆಯನ್ನು ಸೃಷ್ಟಿಸಿದೆ. ಮನೆ ಹಾಗೂ ಜಮೀನುಗಳಿಗೆ ಮಳೆನೀರು ಏಕಾಏಕಿಯಾಗಿ ನೀರು ನುಗ್ಗಿದ್ದು ಗೃಹೋಪಯೋಗಿ ವಸ್ತುಗಳು, ಅಕ್ಕಿ, ಬೇಳೆ, ಟಿವಿ, ಪ್ರಿಡ್ಜ್, ಫ್ಯಾನ್ ಎಲ್ಲವೂ ಹಾನಿಯಾಗಿದೆ. ಜೊತೆಗೆ ಮನೆಗಳು ಬಿರುಕುಬಿಟ್ಟಿದ್ದು ಕುಸಿದು ಬೀಳುವ ಸ್ಥಿತಿಗೆ ತಲುಪಿವೆ.
ಅಂಕೋಲಾ: ಎರಡು ದಿನ ಸುರಿದ ಮುಂಗಾರು ಮಳೆಗೆ ಕಣ್ಣೀರಾದ ಬದುಕು
ಸದ್ಯ ಮಳೆ ಕಡಿಮೆಯಾಗಿದೆ. ಜನರು ನೀರು ತುಂಬಿದ ಮನೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.
Last Updated : Jun 13, 2020, 4:36 PM IST