ಕಾರವಾರ: ಮತದಾನ ಮಾಡಿ ಬಂದ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಳಿಯಾಳ ತಾಲೂಕಿನ ಮುರ್ಕವಾಡದಲ್ಲಿ ಇಂದು ನಡೆದಿದೆ.
ಮತದಾನ ಮಾಡಿ ಬಂದ ಗ್ರಾಪಂ ಸದಸ್ಯನಿಗೆ ಹೃದಯಾಘಾತ: ಸಾವು - ಕಾರವಾರ ಟುಡೆ ನ್ಯೂಸ್
ವಿಧಾನಪರಿಷತ್ ಚುನಾವಣೆಗೆ ಮತದಾನ ಮಾಡಿ ಮನೆಗೆ ಬಂದಿದ್ದ ಗ್ರಾಮ ಪಂಚಾಯತ್ ಸದಸ್ಯ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.

ಹೃದಯಾಘಾತದಿಂದ ಗ್ರಾಪಂ ಸದಸ್ಯ ಸಾವು
ಮುರ್ಕವಾಡದ ಲಕ್ಷ್ಮಣ ಶಿವಾರಾಯ ಮಾನೆ ( 60 ) ಮೃತ ದುರ್ದೈವಿ. ವಿಧಾನಪರಿಷತ್ ಚುನಾವಣೆ ಮತದಾನ ಮಾಡಿ ಬಂದಿದ್ದ ಲಕ್ಷ್ಮಣ ಅವರಿಗೆ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 314 ಮಂದಿಗೆ ಕೋವಿಡ್: ಇಬ್ಬರು ಸೋಂಕಿತರ ಸಾವು