ಶಿರಸಿ:ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ದ್ವಿಚಕ್ರ ವಾಹನದ ಮೆಲೆ ಮರಬಿದ್ದು ಅರಣ್ಯ ರಕ್ಷಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮಾವಿನಗುಂಡಿ ರಸ್ತೆಯ ಕುಳಿಬೀಡು ಬಳಿ ನಡೆದಿದೆ.
ಭಾರಿ ಮಳೆ: ಬೃಹತ್ ಗಾತ್ರದ ಮರ ಬಿದ್ದು ವನಪಾಲಕ ಸ್ಥಳದಲ್ಲೇ ಸಾವು
ಮಲೆನಾಡು ಹಾಗೂ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದೆ. ಸಿದ್ದಾಪುರ ಬಳಿಯ ಕುಳಿಬೀಡಿನಲ್ಲಿ ಅರಣ್ಯ ರಕ್ಷಕ ಶಶಿಧರ್ ದ್ವಿಚಕ್ರ ಚಾಹನದಲ್ಲಿ ಸಾಗುತ್ತಿರುವ ವೇಳೆ ಒಮ್ಮೆಲೇ ಭಾರಿ ಗಾತ್ರದ ಮರ ಬಿದ್ದ ಕಾರಣ ಮರದಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭಾರಿ ಗಾತ್ರದ ಮರ ಬೈಕ್ ಮೇಲೆ ಬಿದ್ದು, ಸಾವನ್ನಪ್ಪಿದ ವ್ಯಕ್ತಿ
ಸಿದ್ದಾಪುರ ತಾಲೂಕಿನ ಹೊಸೂರು ಗ್ರಾಮದ ಅರಣ್ಯ ರಕ್ಷಕ ಶಶಿಧರ್ (58) ಮೃತರು. ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ಚಾಹನದಲ್ಲಿ ಸಾಗುತ್ತಿರುವ ವೇಳೆ ದಿಢೀರ್ನೆ ಭಾರಿ ಗಾತ್ರದ ಮರ ಬಿದ್ದಿದೆ. ಈ ವೇಳೆ ಮರದಡಿಗೆ ಸಿಲುಕಿ ಶಶಿಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಿದ್ದಾಪುರ ಅರಣ್ಯ ಇಲಾಖೆಯ ಸಿಬ್ಬಂದಿ ಮರದ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.