ಕರ್ನಾಟಕ

karnataka

ಹೊಸ ಮೋಟಾರು ವಾಹನ ಕಾಯ್ದೆ ಭಯ: ಎಮಿಷನ್​​​​​ ಟೆಸ್ಟ್​ಗೆ ಬೈಕ್​​​ ಸವಾರರ ಕ್ಯೂ

By

Published : Sep 12, 2019, 1:10 PM IST

Updated : Sep 12, 2019, 3:39 PM IST

ಕೇಂದ್ರ ಸರ್ಕಾರದ ನೂತನ ಮೋಟಾರ್ ವಾಹನ​ ಕಾಯ್ದೆ ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದೆ. ಟ್ರಾಫಿಕ್​ ರೂಲ್ಸ್​ಗೆ ಡೋಂಟ್​ ಕೇರ್​ ಅಂತಿದ್ದವರು ಈಗ ತಮ್ಮ ವಾಹನಗಳಿಗೆ ಬೇಕಾದ ಅಗತ್ಯ ದಾಖಲೆಗಳನ್ನು ಅಪ್​ಡೇಟ್​ ಮಾಡಿಸಿಕೊಳ್ಳುತ್ತಿದ್ದಾರೆ.

ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳಿಗೆ ಲಗ್ಗೆ ಇಟ್ಟ ವಾಹನ ಸವಾರರು

ಭಟ್ಕಳ:ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳಲ್ಲಿ ಜನಸಂದಣಿ ಕಾಣುತ್ತಿದೆ. ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದಾಗಿ ಈ ಕೇಂದ್ರಕ್ಕೆ ಶುಕ್ರದೆಸೆ ಆರಂಭವಾಗಿದೆ.

ದ್ವಿಚಕ್ರ ವಾಹನ ಚಾಲಕರು ತಮ್ಮ ಬೈಕ್​ಗಳನ್ನು ವಾಯು ಮಾಲಿನ್ಯ ಪರೀಕ್ಷೆಗೊಳಪಡಿಸಿ, ಪ್ರಮಾಣಪತ್ರ ಪಡೆಯಲು ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳ ಮುಂದೆ ಸಾಲು ಸಾಲು ವಾಹನಗಳೊಂದಿಗೆ ನಿಂತಿದ್ದಾರೆ.

ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳಿಗೆ ಲಗ್ಗೆ ಇಟ್ಟ ವಾಹನ ಸವಾರರು

ಹೌದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರಾ.ಹೆ. 66ರ ಸಾಮ್ಕೋ ಬಳಿಯ ವಾಯು ಮಾಲಿನ್ಯ ಪರೀಕ್ಷಾ ಕೇಂದ್ರದಲ್ಲಿ ಬೈಕ್ ಸವಾರರು ಸರತಿ ಸಾಲಿನಲ್ಲಿ ನಿಂತುಕೊಂಡು, ತಮ್ಮ ವಾಹನಗಳ ವಾಯು ಮಾಲಿನ್ಯ ಎಮಿಷನ್‍ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.

ಕೇಂದ್ರದ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಂತೆ ಪ್ರತಿಯೋರ್ವ ವಾಹನ ಚಾಲಕ ಅಗತ್ಯ ದಾಖಲೆ ಪತ್ರಗಳನ್ನು ಹೊಂದಿರುವುದು ಕಡ್ಡಾಯ. ವಾಹನ ಸವಾರರು ಹೆಲ್ಮೆಟ್(ದ್ವಿಚಕ್ರ ವಾಹನ ಸವಾರ), ಚಾಲನ ಪ್ರಮಾಣಪತ್ರ, ಹೊಗೆ ಪ್ರಮಾಣಪತ್ರ, ಇನ್ಸುರೆನ್ಸ್ ಮತ್ತಿತರರ ದಾಖಲೆ ಪತ್ರಗಳನ್ನು ಅಗತ್ಯವಾಗಿ ಹೊಂದಿರಬೇಕು. ಇಲ್ಲದಿದ್ದಲ್ಲಿ ಸಾವಿರಾರು ರೂಪಾಯಿ ದಂಡ ತೆರಬೇಕಾದೀತು. ದಂಡ ತೆರುವ ಭಯದಿಂದ ಈಗ ಬೈಕ್ ಹಾಗೂ ಇತರೆ ವಾಹನ ಚಾಲಕರು ತಮ್ಮ ವಾಹನಗಳ ದಾಖಲಾತಿಗಳನ್ನು ಅಪ್​​ಡೇಟ್​ ಮಾಡಿಕೊಳ್ಳುವತ್ತ ಮುಖ ಮಾಡಿದ್ದಾರೆ.

ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳಿದ್ದು, ದಂಡದ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಸೆ. 1ರಿಂದಲೇ ನೂತನ ನಿಯಮಗಳು ಜಾರಿಗೆ ಬಂದಿದ್ದು, ಹಲವು ಕಡೆಗಳಲ್ಲಿ ಇದಕ್ಕೆ ಭಾರಿ ವಿರೋಧಗಳು ವ್ಯಕ್ತವಾಗಿವೆ. ಆದರೆ ಪೊಲೀಸರು ಈ ನೂತನ ನಿಯಮಗಳನ್ನು ಜಾರಿಗೆ ತರುವಲ್ಲಿ ಪಣ ತೊಟ್ಟಿದ್ದು, ಸಾರ್ವಜನಿಕರ ವಿರೋಧವನ್ನು ಎದುರಿಸುವಂತಾಗಿದೆ.

Last Updated : Sep 12, 2019, 3:39 PM IST

ABOUT THE AUTHOR

...view details