ಶಿರಸಿ: ಮಗಳ ಅಕಾಲಿಕ ಮರಣದಿಂದ ನೊಂದ ತಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೂರ್ಸೆ ಬಳಿ ನಡೆದಿದೆ.
ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು - ಶಿರಸಿಯಲ್ಲಿ ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು
ರೇಷ್ಮೆ ಇಲಾಖೆಯ ನೌಕರ ತಾಲೂಕಿನ ಹುತ್ಗಾರ ಬಳಿಯ ರಘುಪತಿ ವೆಂಕಟ್ರಮಣ ಹೆಗಡೆ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟ್ರಮಣ ಹೆಗಡೆಯವರ ಮಗಳು 5 ತಿಂಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದರು. ಇದರಿಂದ ತುಂಬಾ ನೊಂದಿದ್ದ ವೆಂಕಟ್ರಮಣ ಹೆಗಡೆ, ಮಾ. 7ರಂದು ಕೆಲಸಕ್ಕೆ ತೆರಳಿದವರು ಮರಳಿ ಬಾರದೆ ಕಾಣೆಯಾಗಿದ್ದರು.
![ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು Man Commits suicide at Sirsi](https://etvbharatimages.akamaized.net/etvbharat/prod-images/768-512-6344383-thumbnail-3x2-hrs.jpg)
ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು
ರೇಷ್ಮೆ ಇಲಾಖೆಯ ನೌಕರ ತಾಲೂಕಿನ ಹುತ್ಗಾರ ಬಳಿಯ ರಘುಪತಿ ವೆಂಕಟ್ರಮಣ ಹೆಗಡೆ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟ್ರಮಣ ಹೆಗಡೆಯವರ ಮಗಳು 5 ತಿಂಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದರು. ಇದರಿಂದ ತುಂಬಾ ನೊಂದಿದ್ದ ವೆಂಕಟ್ರಮಣ ಹೆಗಡೆ, ಮಾ. 7ರಂದು ಕೆಲಸಕ್ಕೆ ತೆರಳಿದವರು ಮರಳಿ ಬಾರದೆ ಕಾಣೆಯಾಗಿದ್ದರು.
ಈ ಕುರಿತು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕೂರ್ಸೆ ಬಳಿಯ ಮೊಸಳೆ ಗುಂಡಿ ನದಿಯಲ್ಲಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.