ಕರ್ನಾಟಕ

karnataka

ETV Bharat / state

ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು - ಶಿರಸಿಯಲ್ಲಿ ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು

ರೇಷ್ಮೆ ಇಲಾಖೆಯ ನೌಕರ ತಾಲೂಕಿನ ಹುತ್ಗಾರ ಬಳಿಯ ರಘುಪತಿ ವೆಂಕಟ್ರಮಣ ಹೆಗಡೆ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟ್ರಮಣ ಹೆಗಡೆಯವರ ಮಗಳು 5 ತಿಂಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದರು. ಇದರಿಂದ ತುಂಬಾ ನೊಂದಿದ್ದ ವೆಂಕಟ್ರಮಣ ಹೆಗಡೆ, ಮಾ. 7ರಂದು ಕೆಲಸಕ್ಕೆ ತೆರಳಿದವರು ಮರಳಿ ಬಾರದೆ ಕಾಣೆಯಾಗಿದ್ದರು.

Man Commits suicide at Sirsi
ಮಗಳ ಸಾವಿನಿಂದ ನೊಂದು ತಂದೆ ಆತ್ಮಹತ್ಯೆಗೆ ಶರಣು

By

Published : Mar 9, 2020, 7:38 AM IST

ಶಿರಸಿ: ಮಗಳ ಅಕಾಲಿಕ ಮರಣದಿಂದ ನೊಂದ ತಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೂರ್ಸೆ ಬಳಿ ನಡೆದಿದೆ.

ರೇಷ್ಮೆ ಇಲಾಖೆಯ ನೌಕರ ತಾಲೂಕಿನ ಹುತ್ಗಾರ ಬಳಿಯ ರಘುಪತಿ ವೆಂಕಟ್ರಮಣ ಹೆಗಡೆ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟ್ರಮಣ ಹೆಗಡೆಯವರ ಮಗಳು 5 ತಿಂಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದರು. ಇದರಿಂದ ತುಂಬಾ ನೊಂದಿದ್ದ ವೆಂಕಟ್ರಮಣ ಹೆಗಡೆ, ಮಾ. 7ರಂದು ಕೆಲಸಕ್ಕೆ ತೆರಳಿದವರು ಮರಳಿ ಬಾರದೆ ಕಾಣೆಯಾಗಿದ್ದರು.

ಈ ಕುರಿತು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕೂರ್ಸೆ ಬಳಿಯ ಮೊಸಳೆ ಗುಂಡಿ ನದಿಯಲ್ಲಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details