ಶಿರಸಿ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಗುಂಜಾವತಿ ಸಮೀಪ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಮರಿ ಸಾವನ್ನಪ್ಪಿದೆ.
ಮುಂಡಗೋಡ ಬಳಿ ವಾಹನ ಡಿಕ್ಕಿ... ಜಿಂಕೆ ಮರಿ ಸಾವು - undefined
ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಮರಿ ಮೃತಪಟ್ಟಿದೆ. ಮುಂಡಗೋಡ ತಾಲೂಕಿನ ಗುಂಜಾವತಿ ಸಮೀಪ ಘಟನೆ ನಡೆದಿದೆ.
![ಮುಂಡಗೋಡ ಬಳಿ ವಾಹನ ಡಿಕ್ಕಿ... ಜಿಂಕೆ ಮರಿ ಸಾವು](https://etvbharatimages.akamaized.net/etvbharat/images/768-512-2945614-thumbnail-3x2-srs.jpg)
ಜಿಂಕೆ ಮರಿ ಸಾವು
ಮುಂಡಗೋಡ -ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಮರಿಯ ದೇಹವು ಛಿದ್ರ-ಛಿದ್ರವಾಗಿ ರಸ್ತೆ ಪಕ್ಕದ ಕಾಲುವೆಯಲ್ಲಿ ಬಿದ್ದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಜಿಂಕೆಯ ಮೃತದೇಹದ ತುಂಡುಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.