ಭಟ್ಕಳ:ರಸ್ತೆ ಅಪಘಾತದಲ್ಲಿ ಮೃತಪಟ್ಟ ಎರಡು ಗೋವುಗಳನ್ನು ವಾಹನಕ್ಕೆ ಕಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳೆದೊಯ್ದ ಘಟನೆ ಭಟ್ಕಳ ಸಮೀಪದ ಬೆಳಕೆ ಸಮೀಪ ನಡೆದಿದೆ.
ಗೋವಿನ ಕಳೇಬರವನ್ನು ವಾಹನಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಟೋಲ್ ಸಿಬ್ಬಂದಿ - ಮೃತ ಪಟ್ಟ ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ಎಳೆದೊಯ್ದ ಟೋಲ್ ಸಿಬ್ಬಂದಿ
ಮೃತಪಟ್ಟ ಎರಡು ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳೆದೊಯ್ದ ಅಮಾನವೀಯ ಘಟನೆ ಭಟ್ಕಳ ಸಮೀಪದ ಬೆಳಕೆ ಸಮೀಪ ನಡೆದಿದೆ. ಟೋಲ್ ಸಿಬ್ಬಂದಿಯ ಕೃತ್ಯಕ್ಕೆ ತಾಲೂಕಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
![ಗೋವಿನ ಕಳೇಬರವನ್ನು ವಾಹನಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಟೋಲ್ ಸಿಬ್ಬಂದಿ Dead Cow Dragged on Street](https://etvbharatimages.akamaized.net/etvbharat/prod-images/768-512-13827439-thumbnail-3x2-news.jpg)
ಮೃತ ಪಟ್ಟ ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ಎಳೆದೊಯ್ದ ಟೋಲ್ ಸಿಬ್ಬಂದಿ
ತಾಲೂಕಿನ ಗಡಿಭಾಗದಲ್ಲಿರುವ ಶಿರೂರು ಟೋಲ್ಗೆ ಸೇರಿದ 1033 ವಾಹನದಲ್ಲಿ ಮೃತಪಟ್ಟ ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ಎಳೆದೊಯ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಠಾಣೆಗೆ ಕರೆತಂದು ಯುವಕನಿಗೆ ಚಿತ್ರಹಿಂಸೆ ನೀಡಿದ ಆರೋಪ: ಡಿಸಿಪಿಗೆ ನಾಳೆ ವರದಿ ಸಲ್ಲಿಕೆ