ಭಟ್ಕಳ:ತಾಲೂಕಿನ ಹಳೇ ಕುಬೇರ ಹೋಟೆಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನ ಮೃತದೇಹ ಪತ್ತೆಯಾಗಿದೆ.
ಭಟ್ಕಳದಲ್ಲಿ ಹಾಸನ ಮೂಲದ ಕೆ.ಎಸ್.ಆರ್.ಟಿ.ಸಿ ಚಾಲಕನ ಮೃತದೇಹ ಪತ್ತೆ - Hassan driver Dead body found in Bhatkal
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಾಸನ ಮೂಲದ ಬಸ್ ಡ್ರೈವರ್ ಮೃತದೇಹ ಪತ್ತೆಯಾಗಿದೆ. ಆದರೆ ಈತ ಹಾಸನದಿಂದ ಭಟ್ಕಳಕ್ಕೆ ಯಾವ ಉದೇಶಕ್ಕಾಗಿ ಬಂದಿದ್ದರು, ಬಳಿಕ ಏನಾಗಿದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
![ಭಟ್ಕಳದಲ್ಲಿ ಹಾಸನ ಮೂಲದ ಕೆ.ಎಸ್.ಆರ್.ಟಿ.ಸಿ ಚಾಲಕನ ಮೃತದೇಹ ಪತ್ತೆ dead-body](https://etvbharatimages.akamaized.net/etvbharat/prod-images/768-512-9160033-thumbnail-3x2-dhfh.jpg)
ಮೃತ ದೇಹ
ನಾಗರಾಜ್ ಮೃತ ಕೆಎಸ್ಆರ್ಟಿಸಿ ಚಾಲಕ, ಇವರು ಹನುಮಂತಪುರ ಹಾಸನ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. ಗುರುತಿನ ಚೀಟಿಯಲ್ಲಿ ಹಾಸನ ಮೂಲದ ಕೆ.ಎಸ್.ಆರ್.ಟಿ.ಸಿ ಚಾಲಕ ಎಂಬ ವಿಳಾಸ ಇದೆ.
ಹಾಸನ ಮೂಲದ ಕೆ.ಎಸ್.ಆರ್.ಟಿ.ಸಿ ಚಾಲಕನ ಮೃತದೇಹ ಪತ್ತೆಯಾದ ಸ್ಥಳ
ಆದರೆ ಇವರು ಹಾಸನದಿಂದ ಭಟ್ಕಳಕ್ಕೆ ಯಾವ ಉದೇಶಕ್ಕಾಗಿ ಬಂದಿದ್ದರು, ಬಳಿಕ ಏನಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಮೃತದೇಹವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
Last Updated : Oct 13, 2020, 5:13 PM IST