ಕರ್ನಾಟಕ

karnataka

ETV Bharat / state

ಹೊನ್ನಾವರ: ಗೋವು ಕಳ್ಳತನ ಮಾಡಿದ್ದ ಆರು ಮಂದಿ ಬಂಧನ - ಹೊನ್ನಾವರ ಗೋವು ಕಳ್ಳತನ ಪ್ರಕರಣ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಮಂಕಿ ಠಾಣೆ ವ್ಯಾಪ್ತಿಯಲ್ಲಿ ನಡೆದ ದನ ಕಳ್ಳತನ ಪ್ರಕರಣದ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.

cow-thieves-arrested-in-honnavara
ಹೊನ್ನಾವರ, ಮಂಕಿಯಲ್ಲಿ ಗೋವು ಕಳ್ಳತನ ಮಾಡಿದ್ದ ಆರು ಮಂದಿ ಬಂಧನ

By

Published : Aug 26, 2021, 2:27 AM IST

ಕಾರವಾರ:ಅಕ್ರಮ ಗೋ ಸಾಗಾಟ ಮಾಡಿ ತಲೆಮರಿಸಿಕೊಂಡಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಹೊನ್ನಾವರ ಹಾಗೂ ಮಂಕಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಉಡುಪಿ ಮೂಲದವರಾಗಿದ್ಧಾರೆ.

ಉಡುಪಿಯ ವಾಜಿದ್ ಜಾಫರ್ (24), ದೃಶ್ಯ ಮೆಂಡನ್ (20), ಭಟ್ಕಳದ ಸಯ್ಯದ್ ಮುಸ್ಸಾ (22), ಮಹ್ಮದ್ ಫಯಾಜ್ (34), ಪ್ರಣವ್ ಶೆಟ್ಟಿ (19) ಹಾಗೂ ಮಹ್ಮದ್ ಇಬ್ರಾಹಿಂ (42) ಎಂಬುವರನ್ನು ಬಂಧಿಸಲಾಗಿದೆ. ಆಗಸ್ಟ್ 3 ಮತ್ತು 22ರಂದು ಹೊನ್ನಾವರ ತಾಲೂಕಿನ ಮಂಕಿಯ ಗುಣವಂತೆ ಮತ್ತು ಮಾವಿನಕಟ್ಟಾದಲ್ಲಿ ಕಾರುಗಳ ಮೂಲಕ ಬಂದು ಗೋ ಕಳವು ಮಾಡಲಾಗಿತ್ತು.

ಕಳ್ಳತನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಗ್ಯಾಂಗ್ ಪತ್ತೆ ಹಚ್ಚಿದ್ದರು. ತಲೆಮರೆಸಿಕೊಂಡಿದ್ದ ಇವರನ್ನು ಕೊನೆಗೂ ಹೆಡೆಮುರಿ ಕಟ್ಟಿದ ಪೊಲೀಸರು ಕಂಬಿ ಹಿಂದೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಕಳುವಾಗಿದ್ದ ಗೋವುಗಳನ್ನು ಪುನಃ ವಾರಸುದಾರರಿಗೆ ಮರಳಿಸಲಾಗಿದೆ.

ಇದನ್ನೂ ಓದಿ: ಕಾರಿನಲ್ಲಿ ಬಂದು ಹಸು ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details