ಕರ್ನಾಟಕ

karnataka

ಕಾರವಾರದಲ್ಲಿ ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಗೆದ್ದ ಸತೀಶ್​ ಸೈಲ್: ಮೋಡಿ ಮಾಡದ ಮೋದಿ ಕ್ಯಾಂಪೇನ್

By

Published : May 13, 2023, 2:52 PM IST

Updated : May 14, 2023, 6:57 AM IST

ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸತೀಶ್​ ಸೈಲ್​ ಅವರು ಬಿಜೆಪಿಯ ರೂಪಾಲಿ ನಾಯ್ಕ​ ವಿರುದ್ಧ ಗೆಲುವು ಸಾಧಿಸಿದ್ದಾರೆ.

congress-candidate-sathish-sail-won-from-karwar-and-ankola-constituency
ಕಾರವಾರದಲ್ಲಿ ಸತೀಶ್​ ಸೈಲ್​ಗೆ ಗೆಲುವು : ಬಿಜೆಪಿಗೆ ಹುಸಿಯಾದ ಪ್ರಧಾನಿ ಮೋದಿ ಮೋಡಿ ನಿರೀಕ್ಷೆ!

ಕಾರವಾರ (ಉತ್ತರ ಕನ್ನಡ): ಕಾರವಾರ-ಅಂಕೋಲಾ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್​​ ಸೈಲ್​​ ಗೆದ್ದಿದ್ದಾರೆ. ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ 2,415 ಮತಗಳ ಅಂತರದಿಂದ ಗೆಲುವು ಸಾಧಿಸಿದರು.​​ ಕಾಂಗ್ರೆಸ್ ಈ ಗೆಲುವಿನೊಂದಿಗೆ ಕಾರವಾರ-ಅಂಕೋಲಾ ಕ್ಷೇತ್ರವನ್ನು ಮರಳಿ ಪಡೆದುಕೊಂಡಿತು.

ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಸತೀಶ್ ಸೈಲ್ 76,305 ಮತಗಳನ್ನು ಪಡೆದಿದ್ದಾರೆ. ರೂಪಾಲಿ ನಾಯ್ಕ 73,890 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಆಡಳಿತ ವಿರೋಧಿ ಅಲೆ, 40 ಪರ್ಸೆಂಟ್​​ ಭ್ರಷ್ಟಾಚಾರ ಆರೋಪ, 2018ರಲ್ಲಿ ಶಾಸಕರಾದಾಗ ನಡೆಸಿದ ಅಭಿವೃದ್ಧಿ ಕಾಮಗಾರಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು, ಮೀನುಗಾರರ ಪರ ಸಾಗರಮಾಲಾ ಹೋರಾಟಕ್ಕೆ ನಿಂತಿರುವುದು ಸತೀಶ್ ಸೈಲ್ ಗೆಲುವಿಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಸತೀಶ್​ ಸೈಲ್ ಅವರಿಗೆ ಆನಂದ್ ಅಸ್ನೋಟಿಕರ್ ಕೊನೆ ಘಳಿಗೆಯಲ್ಲಿ ಬೆಂಬಲ ಘೋಷಣೆ ಮಾಡಿದ್ದರು. ಇದೂ ಕೂಡ ಸತೀಶ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಮೀನುಗಾರರ ದೊಡ್ಡ ಮಟ್ಟದ ಬೆಂಬಲ, ನಿರಂತರ ಪ್ರಚಾರ, ಅಂಕೋಲಾದಲ್ಲಿ ಕಾಂಗ್ರೆಸ್‌ಗೆ ಜನ ಬಲ ಸತೀಶ್ ಸೈಲ್ ಅವರ ಎರಡನೇ ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನು, ರೂಪಾಲಿ ನಾಯ್ಕರಿಗೆ ಆಪ್ತರೇ ಮುಳುವಾದಂತಾಗಿದೆ. ಬಿಜೆಪಿಗರ ಒಳ ಜಗಳ, ಆಡಳಿತ ವಿರೋಧಿ ಅಲೆ, ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾಮಗಾರಿ ನಡೆಸದೇ ಇರುವುದು, ಗುತ್ತಿಗೆದಾರರಿಂದ ಪ್ಯಾಕೇಜ್ ಆರೋಪ ಮತ್ತು ಆಪ್ತ ಸಹಾಯಕನ ಅಕ್ರಮ ಆಸ್ತಿ ಆರೋಪಗಳು ಬದಲಾವಣೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :ಚುನಾವಣಾ ಫಲಿತಾಂಶ ಕುರಿತು ಡಿ.ಕೆ. ಶಿವಕುಮಾರ್ ಅವರ ಭಾವುಕ ಪ್ರತಿಕ್ರಿಯೆ

ಆಡಳಿತ ವಿರೋಧಿ ಅಲೆ ಬಗ್ಗೆ ಅರಿತ ರೂಪಾಲಿ ನಾಯ್ಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆ ತಂದು ಪ್ರಚಾರ ಕಾರ್ಯ ನಡೆಸಿದ್ದರು. ಅದರಂತೆ, ಅಂಕೋಲಾಗೆ ಆಗಮಿಸಿದ್ದ ಮೋದಿ ಅವರು ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದರು. ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಿ ಜಿಲ್ಲೆಯ 6 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವಂತೆ ಕೋರಿದ್ದರು.

ರೂಪಾಲಿ ನಾಯ್ಕ ಕೂಡ ಶಾಸಕರು ಪ್ರಧಾನಿ ಆಗಮನಕ್ಕೆ ಮಾಜಿ ಶಾಸಕರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಪ್ರಚಾರದುದ್ದಕ್ಕೂ ಇದೇ ವಿಷಯ ಪ್ರಸ್ತಾಪಿಸಿ ಮತ ಯಾಚಿಸಿದ್ದರು. ಮೋದಿ ಬಂದ ಬಳಿಕ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ ಎಂದು ಪ್ರಚಾರ ನಡೆಸಿದ್ದರು. ಆದರೆ ಇದು ಮತದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಖುದ್ದು ಪ್ರಧಾನಿಯೇ ಬಂದು ಪ್ರಚಾರ ನಡೆಸಿದರೂ ಕೂಡ ಕ್ಷೇತ್ರದ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.

ಇದನ್ನೂ ಓದಿ :ಮರುಕಳಿಸಿದ ಇತಿಹಾಸ: ಆಡಳಿತ ಪಕ್ಷಕ್ಕೆ ಸೋಲು, 1999ರ ನಂತರ ಕಾಂಗ್ರೆಸ್​ಗೆ ಹೆಚ್ಚು ಸ್ಥಾನ

Last Updated : May 14, 2023, 6:57 AM IST

ABOUT THE AUTHOR

...view details