ಕರ್ನಾಟಕ

karnataka

ಶಿರಸಿಯಲ್ಲಿ ಶಾಸ್ತ್ರಿಗೆ ಮಾತ್ರ ಗೌರವ ಸಲ್ಲಿಸಿ, ಬಿಜೆಪಿಗರು ಗಾಂಧೀಜಿ ಕಡೆಗಣಿಸಿದ್ದಾರೆ: ಕಾಂಗ್ರೆಸ್​ ಆರೋಪ ​

By

Published : Oct 3, 2019, 10:34 AM IST

ಬಿಜೆಪಿ ಕಾರ್ಯಕರ್ತರು ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಮಾತ್ರ ಗೌರವ ಸಲ್ಲಿಸಿ ಮಹಾತ್ಮ ಗಾಂಧಿಗೆ ಅಗೌರವ ತೋರಿಸಿದ್ದಾರೆ ಎಂಬ ಆರೋಪವೊಂದು ಶಿರಸಿಯಲ್ಲಿ ಕೇಳಿ ಬಂದಿದೆ.

Sirsi

ಶಿರಸಿ:ಬಿಜೆಪಿ ಕಾರ್ಯಕರ್ತರು ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಮಾತ್ರ ಗೌರವ ಸಲ್ಲಿಸಿ ಮಹಾತ್ಮ ಗಾಂಧಿಗೆ ಅಗೌರವ ತೋರಿಸಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಶಿರಸಿಯಲ್ಲಿ ಬಿಜೆಪಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್​

ನಗರದ ರಾಘವೇಂದ್ರ ಸರ್ಕಲ್​ನಲ್ಲಿ ಬಿಜೆಪಿಯ ಹನುಮಾನ ಶಕ್ತಿ ಕೇಂದ್ರ ಹಾಗೂ ಯುವ ಮೋರ್ಚಾ ವತಿಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಮಾತ್ರ ಮಾಲಾರ್ಪಣೆ ಮಾಡಿ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡದೆ ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್​​ ಕಾರ್ಯಕರ್ತರು ದೂರಿದ್ದಾರೆ.

ಬಳಿಕ ಕಾಂಗ್ರೆಸ್ ಪಕ್ಷದ ಕಾರ್ಯಕ್ರರ್ತರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರ ಭಾವಚಿತ್ರಕ್ಕೂ ಮಾಲಾರ್ಪಣೆ ಮಾಡಿ ಮಹನಿಯರ ಜಯಂತಿ ಆಚರಿಸಿದರು.

ಈ ವೇಳೆ ನಗರಸಭೆ ಸದಸ್ಯ ಪ್ರದೀಪ್​ ಶೆಟ್ಟಿ ಮಾತನಾಡಿ, ನಮ್ಮ ದೇಶದ ಇತಿಹಾಸ ತಿಳಿಯದ ಕೆಲವು ಅವಿವೇಕಿಗಳು ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೇಶದ ಇತಿಹಾಸ ತಿರುಚಿ ಮಹಾತ್ಮರ ಹೆಸರಿಗೆ ಮಸಿ ಬಳಿಯುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details