ಕಾರವಾರ: ರಸ್ತೆ ಬದಿಯ ತಡೆಗೋಡೆಗೆ ಕಾರು ಗುದ್ದಿದ ಪರಿಣಾಮ ನಾಲ್ಕು ಚಕ್ರಗಳು ಮೇಲಾಗಿ ಬಿದ್ದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಮಟಾ ತಾಲೂಕಿನ ಕತಗಾಲ್ನ ಅಳ್ಕೋಡ ಸಮೀಪ ನಡೆದಿದೆ.
ಆ ನಾಲ್ವರ ಅದೃಷ್ಟ ಚೆನ್ನಾಗಿತ್ತು.. ಕಾರಿನ ನಾಲ್ಕೂ ಚಕ್ರಗಳು ಮೇಲಾಗಿದ್ವು.. - ಕುಮಟಾ ಪೊಲೀಸ್ ಠಾಣೆ
ರಸ್ತೆ ಬದಿಯ ತಡೆಗೋಡೆಗೆ ಕಾರು ಗುದ್ದಿದ ಪರಿಣಾಮ ನಾಲ್ಕು ಚಕ್ರಗಳು ಮೇಲಾಗಿ ಬಿದ್ದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಮಟಾ ತಾಲೂಕಿನ ಕತಗಾಲ್ನ ಅಳ್ಕೋಡ ಸಮೀಪ ನಡೆದಿದೆ.

ಕಾರು ಅಪಘಾತ
ಪ್ರವಾಸಕ್ಕೆಂದು ಬಂದಿದ್ದ ಆಂಧ್ರ ಮೂಲದ ನಾಲ್ವರು ಪ್ರವಾಸಿಗರು ಕುಮಟಾ, ಶಿರಸಿ ಹೆದ್ದಾರಿ ಮೂಲಕ ತೆರಳುವಾಗ ಅಳ್ಕೋಡ ಬಳಿ ಈ ಅಪಘಾತ ಸಂಭವಿಸಿದೆ. ಈ ವೇಳೆ ಕಾರು ಉಲ್ಟಾ ಬಿದ್ದಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮತ್ತಿಬ್ಬರು ಸವಾರರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ. ಇನ್ನು, ಗಾಯಳುಗಳನ್ನು ಪೊಲೀಸರು ರಕ್ಷಣೆ ಮಾಡಿ ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.