ಕರ್ನಾಟಕ

karnataka

ETV Bharat / state

ಬಿಜೆಪಿಗರು ಕುರ್ಚಿಗಾಗಿ ನಿತ್ಯವೂ ದೆಹಲಿಗೆ ಪರೇಡ್ ನಡೆಸುತ್ತಿದ್ದಾರೆ​: ಬಿ.ಕೆ ಹರಿಪ್ರಸಾದ್ - BJP President Nalin Kumar Kateel statement about congress

ನಮ್ಮ ತಟ್ಟೆಯಲ್ಲಿ ಸೊಳ್ಳೆ ಬಿದ್ದಿರಬಹುದು. ಆದ್ರೆ, ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಅವರು ಅದನ್ನು ತೆಗೆದುಕೊಳ್ಳಲಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್​ ವ್ಯಂಗ್ಯವಾಡಿದರು.

Naleen Kumar Kateel and BK Hariprasad
ನಳೀನ್​ ಕುಮಾರ್​ ಕಟೀಲ್​ ಹಾಗೂ ಬಿ ಕೆ ಹರಿಪ್ರಸಾದ್​

By

Published : Jul 15, 2021, 8:54 PM IST

ಕಾರವಾರ: ಬಿಜೆಪಿಗರು ದಿನನಿತ್ಯವೂ ಕುರ್ಚಿಗಾಗಿ ದೆಹಲಿ ಪರೇಡ್ ನಡೆಸುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​ ಹೇಳಿಕೆಗೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್​ ತಿರುಗೇಟು ನೀಡಿದ್ದಾರೆ.

ಬಿ.ಕೆ ಹರಿಪ್ರಸಾದ್ ಹೇಳಿಕೆ

ಈ ಕುರಿತು ಮಾತನಾಡಿದ ಅವರು, ಬಿಜೆಪಿ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಂದು ಕಿತ್ತು ಹಾಕುತ್ತೇವೆ, ನಾಳೆ ಕುರ್ಚಿ ಬಿಡ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಕಿತ್ತಾಟದಿಂದ ರಾಜ್ಯದಲ್ಲಿ ಕೋವಿಡ್​ ನಿಯಂತ್ರಣವನ್ನು ಸಂಪೂರ್ಣ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಎಕ್ಸಾಮ್ ಬರೆದಿದ್ದೇವೆ, ರಿಸಲ್ಟ್​ಗಾಗಿ ಕಾಯುತ್ತಿದ್ದೇವೆ ಅಂತಾ ಸಚಿವ ಸಿ.ಪಿ.ಯೋಗೇಶ್ವರ್​ ಹೇಳುತ್ತಾರೆ. ಇತ್ತ ಯತ್ನಾಳ್​ ಅವರು, ದಿನಾಂಕ ನೀಡಲಾಗಿದೆ. ಆ ದಿನ ಬದಲಾಗುತ್ತಾರೆ ಎನ್ನುತ್ತಿದ್ದಾರೆ. ನಮ್ಮ ತಟ್ಟೆಯಲ್ಲಿ ಸೊಳ್ಳೆ ಬಿದ್ದಿರಬಹುದು. ಆದ್ರೆ, ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ಏಳು ಜನ ಸಿವಿಲ್ ಡಿವೈಎಸ್ಪಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರದ ಆದೇಶ

ABOUT THE AUTHOR

...view details