ಕರ್ನಾಟಕ

karnataka

ETV Bharat / state

ಬಿಜೆಪಿಗರಿಗೂ ಅನಂತಕುಮಾರ್​​​ ಹೆಗಡೆ ಬೇಕಾಗಿಲ್ಲ: ಆನಂದ್​​ ಅಸ್ನೋಟಿಕರ್​​​

ಅನಂತಕುಮಾರ್ ಹೆಗಡೆ ಬಿಜೆಪಿಯ ಯಾವ ನಾಯಕರಿಗೂ ಬೇಕಾಗಿಲ್ಲ. ಎಲ್ಲರೂ ಕೈಬಿಟ್ಟಿದ್ದರಿಂದ ಒಬ್ಬಂಟಿಗರಾಗಿ ತಿರುಗಾಟ ನಡೆಸುತ್ತಿದ್ದಾರೆ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

By

Published : Mar 30, 2019, 4:39 PM IST

ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್

ಕಾರವಾರ: ಐದು ಬಾರಿ ಸಂಸದರಾದರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸ್ಪಂದಿಸದ ಅನಂತಕುಮಾರ್ ಹೆಗಡೆಗೆ ಈ ಬಾರಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದರು.

ಏ. 4ರಂದು ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗಿಯಾಗುವ ಹಿನ್ನೆಲೆ ಇಂದು ಸಲ್ಲಿಸಬೇಕಾಗಿದ್ದ ನಾಮಪತ್ರ ದಿನಾಂಕವನ್ನು ಮುಂದೂಡಿ ಪುರೋಹಿತರ ಸಲಹೆಯಂತೆ ನಾಮಪತ್ರಕ್ಕೆ ಸಹಿ ಹಾಕಿ ಮನೆಯಲ್ಲಿಯೇ ಇರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಅನಂತಕುಮಾರ್ ಹೆಗಡೆ ಯಾರಿಗೂ ಹೊಲಿಕೆ ಮಾಡಲಾಗದ ಸಂಸದ. 22 ವರ್ಷಗಳ ಕಾಲ ಸಂಸದರಾದರೂ ಒಂದು ಬಾರಿಯೂ ಕೆಡಿಪಿ‌ ಸಭೆಗೆ ಹಾಜರಾಗಿಲ್ಲ. ಕೈಗಾ ಸೀಬರ್ಡ್​ನಂತಹ ಬೃಹತ್ ಯೋಜನೆಗಳಿದ್ದರೂ ಜನರಿಗೆ ಉಪಯೋಗವಾಗುವಂತೆ ಯಾವುದೇ ಕೆಲಸ ಮಾಡಿಲ್ಲ. ಇಂಥವರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್

ಐದು ಬಾರಿ ಸಂಸದರಾಗಿರುವ ಅನಂತಕುಮಾರ್ ಹೆಗಡೆ ಮೊದಲ ಬಾರಿ ಮಾತ್ರ ತಮ್ಮ ಶಕ್ತಿಯ ಮೇಲೆ ಗೆದ್ದಿದ್ದಾರೆ. ಉಳಿದೆಲ್ಲ ಗೆಲುವುಗಳು ಬೇರೆಯವರ ಅಲೆಯಲ್ಲಿಯೇ. ಏನು ಕೆಲಸ ಮಾಡದ ಅನಂತಕುಮಾರ್ ಎಲ್ಲಿಯೇ ಹೊದರು ಜನರು ಅವರನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

ಅನಂತಕುಮಾರ್ ಹೆಗಡೆ ಬಿಜೆಪಿಯ ಯಾವ ನಾಯಕರಿಗೂ ಬೇಕಾಗಿಲ್ಲ. ಎಲ್ಲರೂ ಕೈಬಿಟ್ಟಿದ್ದರಿಂದ ಒಬ್ಬಂಟಿಗರಾಗಿ ತಿರುಗಾಟ ನಡೆಸುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಬಿಜೆಪಿ ನಾಯಕರು ಕೂಡ ಅನಂತಕುಮಾರ್ ವಿರುದ್ಧ ಸಾಕಷ್ಟು ಅಸಾಮಾಧಾನಗಳಿದ್ದು, ತಮ್ಮೊಂದಿಗೆ ಒಡನಾಟದಲ್ಲಿದ್ದಾರೆ. ಎಲ್ಲರೂ ಸೇರಿ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.


ABOUT THE AUTHOR

...view details