ಕರ್ನಾಟಕ

karnataka

By

Published : Jan 14, 2020, 7:14 PM IST

ETV Bharat / state

ಕಾಡು ಪ್ರಾಣಿ ಬಂತೆಂದು ಬ್ರೇಕ್ ಹಾಕಿದ,​ ಹಾರಿ ಹೋಯ್ತು ಪ್ರಾಣಪಕ್ಷಿ..!

ಶಿರಸಿ, ಅತಿ ವೇಗದಿಂದ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬ ಕಾಡು ಪ್ರಾಣಿಯಿಂದ ಪಾರಾಗಲು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ, ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ.

bike-accident-in-sirsi
ಕಾಡು ಪ್ರಾಣಿ ಬಂತೆಂದು ಒತ್ತಿದ ಬ್ರೇಕ್,​ ಹಾರಿ ಹೋಯ್ತು ಪ್ರಾಣಪಕ್ಷಿ..!

ಶಿರಸಿ: ಅತಿ ವೇಗದಿಂದ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬ ಕಾಡು ಪ್ರಾಣಿಯಿಂದ ಪಾರಾಗಲು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ, ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ.

ಸಿದ್ದಾಪುರ ತಾಲೂಕಿನ ಬಾಳೆಕೊಪ್ಪದ ವಿನಾಯಕ ಹೆಗಡೆ (35) ಮೃತಪಟ್ಟ ವ್ಯಕ್ತಿ. ಈತ ತನ್ನ ದ್ವಿಚಕ್ರ ವಾಹನದಲ್ಲಿ ಸಿದ್ದಾಪುರದ ಹೇರೂರು ಕಡೆಯಿಂದ ತನ್ನ ಊರಿಗೆ ಬರುತ್ತಿರುವಾಗ ಹೊಳಬೇರಿ ಹತ್ತಿರ ಆಕಸ್ಮಿಕವಾಗಿ ರಸ್ತೆ ಬದಿಗೆ ಯಾವುದೋ ಕಾಡು ಪ್ರಾಣಿ ಬಂದಿದ್ದನ್ನು ನೋಡಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ABOUT THE AUTHOR

...view details