ಕರ್ನಾಟಕ

karnataka

ETV Bharat / state

ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ : ಆರ್​.ವಿ ದೇಶಪಾಂಡೆ - Bhimanna Naik will win by a tremendous majority said by RV Deshpande at Shirsi

ಕ್ಷೇತ್ರದಲ್ಲಿ ಅನರ್ಹರ ವಿರುದ್ಧದ ಗಾಳಿ ಬೀಸುತ್ತಿದೆ. ಕಾಂಗ್ರೆಸ್​ಗೆ ದ್ರೋಹ ಮಾಡಿ ಬಿಜೆಪಿ ಸೇರಿದವರು ಈಗಾಗಲೇ ಸೋತಿದ್ದಾರೆ. ಅಧಿಕಾರ, ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅನರ್ಹ ಶಾಸಕರು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

Bhimanna Naik will win by a tremendous majority said by RV Deshpande
ಆರ್​.ವಿ ದೇಶಪಾಂಡೆ, ಮಾಜಿ ಸಚಿವ

By

Published : Dec 2, 2019, 5:56 PM IST

ಶಿರಸಿ :ಕಳೆದ 10 ದಿನಗಳಿಂದ ಯಲ್ಲಾಪುರ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದರೂ, ಹೊಸ ಅಭಿವೃದ್ಧಿ ಯಾವುದೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಆರ್​.ವಿ ದೇಶಪಾಂಡೆ, ಮಾಜಿ ಸಚಿವ

ಶಿರಸಿಯಲ್ಲಿ ಮಾತನಾಡಿ, ಬಿಜೆಪಿಯವರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ಶಾಸಕನಾಗಿದ್ದಾಗ ಮಾಡಿದ ರಸ್ತೆಗಳು, ಕುಡಿಯುವ ನೀರಿನ ಯೋಜನೆಗಳೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಇಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದರು.

ಕ್ಷೇತ್ರದಲ್ಲಿ ಅನರ್ಹರ ವಿರುದ್ಧದ ಗಾಳಿ ಬೀಸುತ್ತಿದೆ. ಕಾಂಗ್ರೆಸ್​ಗೆ ದ್ರೋಹ ಮಾಡಿ ಬಿಜೆಪಿ ಸೇರಿದವರು ಈಗಾಗಲೇ ಸೋತಿದ್ದಾರೆ. ಅಧಿಕಾರ, ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅನರ್ಹ ಶಾಸಕರು ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿ ನಾಯಕರು ಈಗಾಗಲೇ ಸೋತಿದ್ದಾರೆ. ಆ ಕಾರಣದಿಂದ ಕೊನೆಯ ಅಸ್ತ್ರವಾಗಿ ಹಣ ಮತ್ತು ಹೆಂಡ ಹಂಚಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆದ್ದರಿಂದ ಕ್ಷಣಿಕ ಸುಖಕ್ಕಾಗಿ ಮತದಾರ ಆಮಿಷಕ್ಕೆ ಒಳಗಾಗಬಾರದು ಎಂದರು.

For All Latest Updates

TAGGED:

ABOUT THE AUTHOR

...view details