ಕರ್ನಾಟಕ

karnataka

ಸಾಮಾಜಿಕ ಕಾರ್ಯಕರ್ತ ನಿಸಾರ ಅಹ್ಮದ್ ಅವರನ್ನು ಗೌರವಿಸಿದ ಭಟ್ಕಳ ಬ್ಲಾಕ್ ಕಾಂಗ್ರೆಸ್

By

Published : Jun 18, 2020, 6:18 PM IST

Updated : Jun 20, 2020, 5:09 PM IST

ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾದ ದಿನದಿಂದ ಇಲ್ಲಿಯ ವರೆಗೆ ಕೋವಿಡ್ ವಾರಿಯರ್ಸ್ ಜೊತೆ ನಿಂತು ನಿರಂತರ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ನಿಸಾರ ಅಹ್ಮದ್ ಅವರನ್ನು ಗೌರವಿಸಲಾಯಿತು.

Bhatkal black Congress committee
Bhatkal black Congress committee

ಭಟ್ಕಳ: ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರತಿಫಲಾಫೇಕ್ಷೆ ಇಲ್ಲದೆ ಇಂದಿನವರೆಗೂ ನಿರಂತರವಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ನಿಸಾರ ಅಹ್ಮದ್ ಅವರನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗೌರವಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ನಿಸಾರ ಅಹ್ಮದ್ ಅವರನ್ನು ಗೌರವಿಸಿದ ಭಟ್ಕಳ ಬ್ಲಾಕ್ ಕಾಂಗ್ರೆಸ್

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ, ಆರಂಭದಲ್ಲಿ ಕೊರೊನಾ ಆತಂಕವಿತ್ತು. ಅಂತಹ ಸಂದರ್ಭದಲ್ಲಿ ಸೋಂಕಿತರೊಂದಿಗೆ ನಿಂತು ಉಪಚಾರ ಮಾಡಿ ಅವರಿಗೆ ನಿಸಾರ ಅವರು ನೆರವಾಗಿದ್ದಾರೆ. ಸೋಂಕಿತರೊಂದಿಗೆ ತೆರಳಿ ಅವರಲ್ಲಿ ಆತ್ಮಸ್ಥ್ಯರ್ಯ ತುಂಬಿದ್ದಾರೆ.

ಅಂದಿನ ಸ್ಥಿತಿಯಲ್ಲಿ ಸ್ವತಃ 3 ಬಾರಿ ಇವರ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು,ಆದರೆ ಯಾವುದಕ್ಕೂ ಭಯಬೀಳದೆ ಸೋಂಕಿತರ ಸೇವೆಯಲ್ಲಿ ನಿರತವಾಗಿದ್ದದ್ದು ನಮಗೆಲ್ಲ ಮಾದರಿ ಎಂದು ಹೇಳಿದರು.

Last Updated : Jun 20, 2020, 5:09 PM IST

ABOUT THE AUTHOR

...view details