ಕರ್ನಾಟಕ

karnataka

ETV Bharat / state

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ PUC, SSLC ವಿದ್ಯಾಗಮ ಆರಂಭ: ಕಾಗೇರಿ ಪರಿಶೀಲನೆ - speaker of vidhanasabha vishweshwarayya kageri

ಶಿರಸಿಯಲ್ಲಿ ಇಂದಿನಿಂದ ಪಿಯುಸಿ, ಎಸ್​ಎಸ್​ಎಲ್​ಸಿ ತರಗತಿಗಳು ಹಾಗೂ ಸರ್ಕಾರದ ವಿದ್ಯಾಗಮ–2 ಸಹ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪರಿಶೀಲನೆ ನಡೆಸಿದ್ರು.

ವಿಧಾನಸಭಾಧ್ಯಕ್ಷರಿಂದ ಪರಿಶೀಲನೆ
ವಿಧಾನಸಭಾಧ್ಯಕ್ಷರಿಂದ ಪರಿಶೀಲನೆ

By

Published : Jan 1, 2021, 8:31 PM IST

ಶಿರಸಿ: ರಾಜ್ಯ ಸರ್ಕಾರದ ಸೂಚನೆಯಂತೆ ಶಿರಸಿಯಲ್ಲಿ ಹೊಸ ವರ್ಷದಿಂದ ದ್ವಿತೀಯ ಪಿಯುಸಿ, ಎಸ್​ಎಸ್​ಎಲ್​ಸಿ ತರಗತಿಗಳು ಆರಂಭಗೊಂಡಿದ್ದು, ಸರ್ಕಾರದ ವಿದ್ಯಾಗಮ–2 ಗೂ ಸಹ ಚಾಲನೆ ನೀಡಲಾಗಿದೆ.‌

ವಿಧಾನಸಭಾಧ್ಯಕ್ಷರಿಂದ ಪರಿಶೀಲನೆ

ಒಂಬತ್ತು ತಿಂಗಳ ಬಳಿಕ ಶಾಲೆಗೆ ಬರಲು ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿದ್ದು, ತರಗತಿ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳ ದೈಹಿಕ ಉಷ್ಣಾಂಶ ಪರೀಕ್ಷಿಸಿ ಒಳಗೆ ಬಿಡಲಾಯಿತು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೊಠಡಿಯಲ್ಲಿ ಕೂರಿಸಿ ಪಾಠ ಮಾಡಲಾಯಿತು.

ಶೇ.63ರಷ್ಟು ಹಾಜರಾತಿ:ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್​​ಎಸ್​​ಎಲ್​ಸಿ ಪ್ರಾರಂಭೋತ್ಸವಕ್ಕೆ ಸ್ಪಂದನೆ ಸಿಕ್ಕಿದೆ. ಮೊದಲ ದಿನವೇ ಶೇ.63.90ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. 10,677 ವಿದ್ಯಾರ್ಥಿಗಳ ಪೈಕಿ 6823 ತರಗತಿಗಳಿಗೆ ಬಂದಿದ್ದರು. 6 ರಿಂದ 9ನೇ ತರಗತಿಯ ವಿದ್ಯಾಗಮ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇ.41.06ರಷ್ಟಿತ್ತು. 46,734 ವಿದ್ಯಾರ್ಥಿಗಳಲ್ಲಿ 19,188 ವಿದ್ಯಾರ್ಥಿಗಳು ಹಾಜರಾಗಿದ್ದರು.

ಓದಿ:ಖುಷಿಯಿಂದ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು: ಕೋವಿಡ್ ಮುಂಜಾಗ್ರತೆಯ ಪಾಠ ಮಾಡಿದ ಸಿಇಒ

ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಗೆ ತೆರಳಿ ಕೈಗೊಂಡ ಮುನ್ನೆಚ್ಚರಿಕೆಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳ ಜತೆ ಮಾತನಾಡಿ, ಧೈರ್ಯ ತುಂಬಿದರು.

ದ್ವಿತೀಯ ಪಿಯುಸಿ ತರಗತಿ ಸಹ ಆರಂಭ: ಶಿರಸಿ ತಾಲೂಕಿನ 14 ಪದವಿಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ತರಗತಿ ಆರಂಭಗೊಂಡಿದ್ದರೂ ಹಾಜರಾತಿ ಕಡಿಮೆ ಪ್ರಮಾಣದಲ್ಲಿತ್ತು. 1200ರಷ್ಟು ವಿದ್ಯಾರ್ಥಿಗಳು ಮೊದಲ ದಿನ ಹಾಜರಾಗಿದ್ದರು. ಬಸ್​​ಗಳ ಸಮಸ್ಯೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ - ಕಾಲೇಜಿಗೆ ಆಗಮಿಸಲು ಸಮಸ್ಯೆ ಉಂಟಾಗಿತ್ತು.

ABOUT THE AUTHOR

...view details