ಕರ್ನಾಟಕ

karnataka

ETV Bharat / state

ಭಾರತ್ ಬಂದ್ ಯಶಸ್ವಿಗೆ ಬಹುಜನ ಕ್ರಾಂತಿ ಮೋರ್ಚಾ ಕರೆ : ಪೋಸ್ಟರ್ ಬಿಡುಗಡೆ - ಭಟ್ಕಳ ಸುದ್ದಿ

ಡಿಎನ್​ಎ ಆಧಾರಿತ ಎನ್​ಆರ್​ಸಿ ಮಾಡಬೇಕು ಎಂದು ಬಹುಜನ ಕ್ರಾಂತಿ ಮೋರ್ಚಾ ಸಂಘಟನೆ ದೇಶದಾದ್ಯಂತ ನಾಳೆ ಬಂದ್​ಗೆ ಕರೆ ನೀಡಿದೆ. ಭಟ್ಕಳದಲ್ಲಿ ಇದನ್ನು ಯಶಸ್ವಿಗೊಳಿಸಬೇಕೆಂದು ಬಹುಜನ ಕ್ರಾಂತಿ ಮೋರ್ಚಾದ ಮುಖಂಡ ಆದಂ ಪಣಂಬೂರು ಕರೆ ನೀಡಿದರು.

bahujan-revolution-morcha-calls-for-bharat-bandh-success
ಭಾರತ್ ಬಂದ್ ಯಶಸ್ವಿಗೆ ಬಹುಜನ ಕ್ರಾಂತಿ ಮೋರ್ಚಾ ಕರೆ

By

Published : Jan 28, 2020, 11:16 PM IST

Updated : Jan 28, 2020, 11:27 PM IST

ಭಟ್ಕಳ: ಡಿಎನ್​ಎ ಆಧಾರಿತ ಎನ್​ಆರ್​ಸಿ ಮಾಡಬೇಕು ಎಂದು ಬಹುಜನ ಕ್ರಾಂತಿ ಮೋರ್ಚಾ ಸಂಘಟನೆ ದೇಶದಾದ್ಯಂತ ಜ.29ರಂದು ಬಂದ್​ಗೆ ಕರೆ ನೀಡಿದೆ. ಭಟ್ಕಳದಲ್ಲಿ ಇದನ್ನು ಯಶಸ್ವಿಗೊಳಿಸಬೇಕೆಂದು ಬಹುಜನ ಕ್ರಾಂತಿ ಮೋರ್ಚಾದ ಮುಖಂಡ ಆದಂ ಪಣಂಬೂರು ಕರೆ ನೀಡಿದರು.

ಹೊಟೇಲ್ ಶ್ರೀನಿವಾಸ ಡಿಲಕ್ಸ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಹುಜನ ಕ್ರಾಂತಿ ಮೋರ್ಚಾ ಮೂರು ಹಂತದಲ್ಲಿ ರಾಷ್ಟ್ರವ್ಯಾಪಿ ಆಂದೋಲನ ನಡೆಸಲಿದ್ದು ಬುಧವಾರ ನಡೆಯುತ್ತಿರುವುದು ಮೂರನೇ ಹಂತದ ಹೋರಾಟ, ನಾವು ಡಿಎನ್​ಎ ಆಧಾರಿತ ಎನ್ಆ​ರ್​ಸಿ ಮಾಡಬೇಕೆಂದು ಆಗ್ರಹಿಸುತ್ತೇವೆ. ದೇಶದ ಮೂಲ ನಿವಾಸಿಗಳು ಯಾರೆಂದು ಆಗ ತಿಳಿದು ಬರುತ್ತದೆ. ಇದರಿಂದಾಗಿ ಇಡೀ ದೇಶದ ಮುಂದೆ ವಿದೇಶಿಯರು ಯಾರು ಎಂಬುದು ತಿಳಿದು ಬರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಭಾರತ ಬಂದ್​ಗೆ ಸಂಬಂಧಿಸಿದ ಪೋಸ್ಟರ್ ಸಹ ಬಿಡುಗಡೆ ಮಾಡಿದರು.

ಭಾರತ್ ಬಂದ್ ಯಶಸ್ವಿಗೆ ಬಹುಜನ ಕ್ರಾಂತಿ ಮೋರ್ಚಾ ಕರೆ

ಈ ಸಂದರ್ಭದಲ್ಲಿ ಮುಖಂಡರಾದ ಶೌಕತ್ ಕತೀಬ್, ಯೂನೂಸ್ ರುಕ್ನುದ್ದೀನ್, ಮುನೀರ್ ಎಂ.ಹೆಚ್. ವಸೀಮ್ ಮನೆಗಾರ ಮುಂತಾದವರು ಉಪಸ್ಥಿತರಿದ್ದರು.

Last Updated : Jan 28, 2020, 11:27 PM IST

ABOUT THE AUTHOR

...view details