ಶಿರಸಿ(ಉತ್ತರ ಕನ್ನಡ) :ಕೊಳೆ ರೋಗ, ಅಡಿಕೆ ಮಿಳ್ಳೆ ಉದುರುವುದು, ಮಂಗನ ಕಾಟ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಕಂಗೆಟ್ಟಿದ್ದ ಅಡಿಕೆ ಬೆಳೆಗಾರರಿಗೆ ಈಗ ಬಂಪರ್ ಲಾಟರಿ ಹೊಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ವಾಣಿಜ್ಯ ಬೆಳೆಯಾದ ಅಡಿಕೆ ದರ ಕಳೆದೆರಡು ವಾರಗಳಿಂದ ಭಾರಿ ಏರಿಕೆ ಕಂಡಿರುವುದು ಬೆಳೆಗಾರರಿಗಿಂತ ವ್ಯಾಪಾರಸ್ಥರ ಮೊಗದಲ್ಲಿ ಹೆಚ್ಚು ಸಂತಸ ಮೂಡಿಸಿದೆ.
ಎಂದಿನಂತೆ ಶ್ರಾವಣ ಮಾಸದಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ದರ ಸಕತ್ ತೇಜಿಯಾಗಿದೆ. ಹದಿನೈದು ದಿನಗಳ ಹಿಂದೆ 38-39 ಸಾವಿರ ರೂಪಾಯಿ ದರವಿದ್ದ ಚಾಲಿಗೆ ಪ್ರಸ್ತುತ 43-45 ಸಾವಿರ ದರ ಕಾಣುತ್ತಿದೆ. ಒಂದು ವಾರದೊಳಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಏರಿಕೆಯಾಗಿದೆ. ಇನ್ನೊಂದೆಡೆ ಕೆಂಪಡಿಕೆ ದರ ಸಹ 48-49 ಸಾವಿರವಿರುವುದು ಈಗ 50-51 ಸಾವಿರಕ್ಕೆ ತಲುಪಿದೆ. ಇತ್ತೀಚೆಗೆ ಅಡಿಕೆ ಬೆಳೆಯುವವರ ಸಂಖ್ಯೆಯು ಹೆಚ್ಚಾಗಿದೆ. ದರ ಯಾವಾಗ ಬೇಕಾದರೂ ವ್ಯತ್ಯಾಸ ಕಾಣಬಹುದಾಗಿದೆ. ಹೀಗಾಗಿ ರೈತರು ಖರ್ಚು ವೆಚ್ಚ ನಿಭಾಯಿಸಿಕೊಂಡು ಹೋಗಬೇಕು ಎನ್ನುವುದು ಸಹಕಾರಿ ಸಂಘಗಳ ಅಭಿಪ್ರಾಯವಾಗಿದೆ.
ಇದನ್ನೂ ಓದಿ:ಎರಡು ತಾಲೂಕುಗಳಿಗೆ ಮಲತಾಯಿ ಧೋರಣೆ : ಅಡಕೆ ಬೆಳೆಗೆ ಸಬ್ಸಿಡಿ ನೀಡುವಂತೆ ರೈತರ ಒತ್ತಾಯ